ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ, ಶಾರದೋತ್ಸವ: ಆಮಂತ್ರಣ ಪತ್ರ ಬಿಡುಗಡೆ

0


ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದ 90ನೇ ವರ್ಷದ ನವರಾತ್ರಿ ಉತ್ಸವ, ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಸೆ.17ರಂದು ಮಂದಿರದಲ್ಲಿ ನಡೆಯಿತು.

ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ ಪ್ರಾರ್ಥಿಸಿ, ಸಮಿತಿಗೆ ಆಮಂತ್ರಣ ಪತ್ರ ಹಸ್ತಾಂತರಿಸಿದರು.


ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಹೊರೆಕಾಣಿಕೆ ಸಂಚಾಲಕ ರಾಜೇಶ್ ಬನ್ನೂರು, ಕಾರ್ಯದರ್ಶಿ ಜಯಂತ ಉರ್ಲಾಂಡಿ, ಜತೆ ಕಾರ್ಯದರ್ಶಿಗಳಾದ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಕೋಶಾಧಿಕಾರಿ ತಾರನಾಥ್ ಹೆಚ್, ಸದಸ್ಯರುಗಳಾದ ರಮಾನಂದ ರಾವ್, ಶ್ರೀಧರ ಆಚಾರ್ಯ, ಜಯಕಿರಣ್ ಉರ್ಲಾಂಡಿ, ಲಿಂಗಪ್ಪ ಗೌಡ, ಸುಧೀರ್, ವಿಘ್ನೇಶ್, ಅಶ್ವಿನಿ, ಗೋಪಾಲ ಆಚಾರ್ಯ, ಯೋಗಾನಂದ ರಾವ್, ಪದ್ಮನಾಭ, ಪ್ರಜ್ವಲ್ ಉರ್ಲಾಂಡಿ, ವಸಂತ, ಗುಲಾಬಿ ಗೌಡ, ರೇಖಾ ಅನಿಲ್‌ ಉರ್ಲಾಂಡಿ, ರೇಖಾ ರೈ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here