ಕೆಮ್ಮಾರ: ಗಣೇಶ ಕಟ್ಟೆ ಪೂಜಾ ಸಮಿತಿಯಿಂದ ಸ್ವಚ್ಛತೆ

0

ಉಪ್ಪಿನಂಗಡಿ: ಗಣೇಶಕಟ್ಟೆ ಪೂಜಾ ಸಮಿತಿ ಮುದಲೆಗುಂಡಿ ಕೆಮ್ಮಾರ ಇದರ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಅ.2ರಂದು ಗಾಂಧಿಜಯಂತಿಯಂದು ನಡೆಯಿತು.


ಬೆಳಿಗ್ಗೆ ಕೆಮ್ಮಾರ ಶಾಲಾ ಬಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ಹೆದ್ದಾರಿಯುದ್ದಕ್ಕೂ ಸಮಿತಿ ಸದಸ್ಯರು ಸ್ವಚ್ಛತೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೆಮ್ಮಾರ ಗುತ್ತು, ಕಾರ್ಯದರ್ಶಿ ಮೋಹನ್‌ಚಂದ್ರ ನೆಕ್ಕರಾಜೆ ಹಾಗೂ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಮುದಲೆಗುಂಡಿ ಬಳಿ ಉಪಹಾರ ವ್ಯವಸ್ಥೆಯನ್ನು ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗಾಧರ್ ಪಿ.ಎನ್ ನೀಡಿ ಸಹಕರಿಸಿದರು. ಕಣಿಯ ಪಾಯಿಂಟ್ ಬಳಿ ಹರೀಶ್ ಕಣಿಯ ಅವರು ಕಬ್ಬು ಜ್ಯೂಸ್ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here