ಉಪ್ಪಿನಂಗಡಿ: ಸೇವಾ ನಿವೃತಿ ಪಡೆದ ಯೋಧ ಸತೀಶ ಪಲ್ಲೆಜಾಲು ಅವರಿಗೆ ಹುಟ್ಟೂರ ಸ್ವಾಗತ

0

ಉಪ್ಪಿನಂಗಡಿ: ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯನ್ನು ಪಡೆದು ಅ.24ರಂದು ಹುಟ್ಟೂರಿಗೆ ಆಗಮಿಸಿದ ಯೋಧ ಹಿರೇಬಂಡಾಡಿ ಗ್ರಾಮದ ಸತೀಶ ಪಲ್ಲೆಜಾಲು ಅವರಿಗೆ ಹುಟ್ಟೂರ ನಾಗರಿಕರು, ಅಭಿಮಾನಿಗಳು, ಸಂಬಂಧಿಕರಿಂದ ಇಲ್ಲಿನ ಗಾಂಧಿಪಾರ್ಕ್ ಬಳಿಯ ಹಿರೇಬಂಡಾಡಿ ಕ್ರಾಸ್‌ನಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು.


ಹಿರೇಬಂಡಾಡಿ ಗ್ರಾಮದ ಪಲ್ಲೆಜಾಲುವಿನ ಅಣ್ಣು ಗೌಡ ಮತ್ತು ಸೀತಮ್ಮ ದಂಪತಿಯ ಪುತ್ರನಾದ ಇವರು 2000ರಲ್ಲಿ ಮಹಾರಾಷ್ಟ್ರದ ಅರ್ಟಿಲರಿ ಸೆಂಟರ್ ನಾಸಿಕ್ ರೋಡ್ ಕ್ಯಾಂಪ್‌ನಲ್ಲಿ ಸೇನಾ ತರಬೇತಿ ಮುಗಿಸಿ ಬಳಿಕ ವಿವಿಧ ಪ್ರದೇಶಗಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸೈನಿಕ ವೃತ್ತಿಯಲ್ಲಿ ಸೇನಾಧಿಕಾರಿಯಾಗಿ ಎಂಎಸಿಪಿ ಎನ್‌ಬಿ/ಎಸ್‌ಯುಬಿ ಎಂಬ ರ‍್ಯಾಂಕ್ ಗಳಿಸಿರುವ ಇವರು 2024ರ ಜೂ.20ರಿಂದ ಪಂಜಾಬ್‌ನ ಪಿರೋಜ್ಪುರ್ ಕ್ಯಾಂಟ್ 310 ಎಫ್‌ಡಿ ರೆಜಿಮೆಂಟ್‌ನಲ್ಲಿ ಸೇವೆಯನ್ನು ನಿರ್ವಹಿಸಿ ಈಗ ಸೇವಾ ನಿವೃತ್ತಿಯನ್ನು ಪಡೆದು ಹುಟ್ಟೂರಿಗೆ ಆಗಮಿಸಿದರು.


ಸ್ವಾಗತ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ತಾ.ಪಂ. ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ, ಹೇಮಂತ್ ಮೈತಳಿಕೆ, ಮಾಜಿ ಸದಸ್ಯ ಸೋಮೇಶ್, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯೆ ಉಷಾಚಂದ್ರ ಮುಳಿಯ, ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕಜೆ, ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ ಹಿರೇಬಂಡಾಡಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಶಾಂತಿದಡ್ಡ, ಪ್ರಮುಖರಾದ ಗಣೇಶ್ ಮಠಂದೂರು, ರೇವತಿ ಹಳೆಮನೆ, ನವೀನ್ ಪಡ್ಪು, ರೋಹಿತ್ ಸರೋಳಿ, ವಿಶ್ವನಾಥ ಕೆಮ್ಮಟೆ, ನವೀನ್ ಪೆರಾಬೆ, ರಮಾನಂದ ಪೆರಾಬೆ, ಅಶೋಕ್ ಶೆಟ್ಟಿ, ಮೋನಪ್ಪ ಗೌಡ ಮುಡಿಪು, ನವೀನ್ ಕುಬಲ, ಬಾಲಚಂದ್ರ ಗುಂಡ್ಯ, ಗಂಗಾಧರ ಬಾರ್ಲ, ಸತೀಶ್ ಪಲ್ಲೆಜಾಲು ಅವರ ತಂದೆ ಅಣ್ಣು ಗೌಡ, ಸೀತಮ್ಮ, ಪತ್ನಿ ಪ್ರಥ್ವಿ, ಪ್ರಥ್ವಿ, ಚೈಶ್ವಿ ಎಸ್., ಸಂಬಂಧಿಗಳಾದ ದೇವಿಪ್ರಸಾದ್, ಪ್ರಶಾಂತಿ, ಪ್ರಕೃತಿ ಪಿ., ಪ್ರಖೇತ್ ಪಿ., ಜ್ಯೋತಿ ಹೇಮಚಂದ್ರ, ಮನೀಶ್ ಪಿ., ತನೀಶ್ ಪಿ., ಹರೀಶ್ ಗೌಡ, ಮಮತಾ ಕೆ., ಹಿಮಾಂಶು ಎಂ.ಎಚ್., ಶ್ರೀಯಾ ಎಂ.ಎಚ್., ಶಿವಪ್ಪ ಗೌಡ, ಶಿವಮ್ ಮ , ಯೊಗೀಶ, ಉಷಾ ಕುಮಾರಿ, ನಿಶ್ಚಿತಾ ಕೆ., ಧೃತಿ ಕೆ., ಧ್ರುವ ಕೆ., ಮೀನಾಕ್ಷಿ ಮಾಯಿಲಪ್ಪ ಗೌಡ, ಚರಣ್ ಕುಮಾರ್ ಪಿ., ವಂದನಾ ಕೆ., ಪ್ರದೀಪ್ತ ಎಂ., ಪ್ರಣವಿ ಎಂ. ಮತ್ತಿತರರು ಉಪಸ್ಥಿತರಿದ್ದರು.

ಪೋಟೋ: ಸ್ವಾಗತ

LEAVE A REPLY

Please enter your comment!
Please enter your name here