ಪುತ್ತೂರು: ನಗರಸಭೆ ವಾಹನ ಚಾಲಕ ಬಲ್ನಾಡು ಉಜ್ರುಪಾದೆ ನಿವಾಸಿ ರಾಧಾಕೃಷ್ಣ ಅವರ ತಾಯಿ ಸರೋಜಿನಿ (75ವ)ರವರು ಫೆ.25ರಂದು ನಿಧನರಾದರು.
ಮೃತರು ಪುತ್ರ ರಾಧಾಕೃಷ್ಣ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸದಸ್ಯೆ ಪೂರ್ಣಿಮಾ, ಪಂಚಾಯತ್ ಸದಸ್ಯ ಬಾಲಸುಬ್ರಹ್ಮಣ್ಯ, ನಾರಾಯಣ ಸಹಿತ ಹಲವಾರು ಮಂದಿ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.