ನೆಲ್ಯಾಡಿ: ಮನೆಯವರೆಲ್ಲರೂ ಈಸ್ಟರ್ ಹಬ್ಬಕ್ಕೆ ತೆರಳಿದ್ದ ವೇಳೆ ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೊಂಡಿರುವ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಎ.19ರಂದು ರಾತ್ರಿ ನಡೆದಿದೆ.
ಹೊಸಮಜಲು ನಿವಾಸಿ, ಕೃಷಿಕ ಸಿ.ಎ.ಅಬ್ರಹಾಂರವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅಬ್ರಹಾಂ, ಅವರ ಪತ್ನಿ ಲೀಲಾತಂಬಿ, ಪುತ್ರ ಅನಿಲ್ ಅಬ್ರಹಾಂ ಹಾಗೂ ಇಬ್ಬರು ಮೊಮ್ಮಕ್ಕಳು ಎ.19ರಂದು ಸಂಜೆ 6.30ಕ್ಕೆ ಮನೆಗೆ ಬೀಗ ಹಾಕಿ ಕೊಣಾಲು ಚರ್ಚ್ನಲ್ಲಿ ನಡೆಯುತ್ತಿದ್ದ ಈಸ್ಟರ್ ಹಬ್ಬಕ್ಕೆ ತೆರಳಿದ್ದಾರೆ. 11.30ರ ವೇಳೆಗೆ ಅವರು ಮನೆಗೆ ಹಿಂತಿರುಗಿ ಬಂದಿದ್ದು ಈ ವೇಳೆ ಮುಂಬಾಗಿಲು ಬೀಗ ಮುರಿದಿರುವುದು ಕಂಡುಬಂದಿದೆ.

ಮನೆಯೊಳಗೆ ತೆರಳಿ ಪರಿಶೀಲನೆ ವೇಳೆ ಬೆಡ್ರೂಮ್ನ ಕಪಾಟಿನ ಬೀಗವನ್ನೂ ಮುರಿದು ಅದರಲ್ಲಿದ್ದ ಅಂದಾಜು 8 ಪವನ್ ಚಿನ್ನಾಭರಣ ಕಳವುಗೈದಿರುವುದು ಬೆಳಕಿಗೆ ಬಂದಿದೆ.

ಮನೆಯವರು ತಕ್ಷಣ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎ.20ರಂದು ಬೆಳಿಗ್ಗೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.