![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ವಾಯ್ಸ್ ಆಫ್ ಆರಾಧನಾ ಮೂಡಬಿದ್ರಿ ಮತ್ತು ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಇದರ ಜಂಟಿ ಆಶ್ರಯದಲ್ಲಿ ಶಿವನಗರದ ಶಿವಮಣಿ ಕಲಾಸಂಘದ ಕಲಾವಿದರಾದ ಅನ್ನಪೂರ್ಣ ಹಾಗೂ ನಿಶ್ಚಿತರವರನ್ನು ಶಿವನಗರ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ರಂಗಭೂಮಿ ಕಲಾವಿದ ಜೆಪಿ ಸಂತೋಷ್ ಮುರ ಶುಭ ಹಾರೈಸಿದರು. ಅತಿಥಿಗಳಾಗಿ ಶಿವಮಣಿ ಕಲಾ ಸಂಘದ ಅಧ್ಯಕ್ಷ ರಂಗಭೂಮಿ ಕಲಾವಿದ ಗಾಯಕರಾದ ದೀಪಕ್ ಉಪ್ಪಿನಂಗಡಿ, ಶಿವಮಣಿ ಭಜನಾ ತಂಡದ ಸದಸ್ಯೆ ಅರುಣ, ಶಿವಮಣಿ ಕಲಾಸಂಘದ ಸಂಚಾಲಕ ಮನು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ರಾಜೀವ್ ಗೌಡ ಸನ್ಮಾನ ಪತ್ರ ಓದಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.