ನಾರಾವಿ: ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿ ಇಲ್ಲಿ ನವಜೀವನ ಸಮಿತಿ ಸದಸ್ಯರ ಎರಡನೇ ತಿಂಗಳ ಸಭೆಯು ನಡೆಯಿತು.
ಈ ಸಭೆಯಲ್ಲಿ ವಲಯ ಅಧ್ಯಕ್ಷರಾದ ನಿತ್ಯಾನಂದ ರವರ ಜನಜಾಗೃತಿ ವೇದಿಕೆಯ ಸದಸ್ಯರಾದ ವಸಂತ ಗುಣ ನೀಲ ಹಾಗೂ ಯೋಜನಾಧಿಕಾರಿ ಯಶವಂತ್ , ಶಿಬಿರ ಅಧಿಕಾರಿಯಾದ ದೇವಪ್ರಸಾದ್ ಹಾಗೂ ನಾರಾವಿ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ದಾಸ್ ಹಾಗೂ ವಿಪತ್ತು ಸಂಯೋಜಕಿ ಮತ್ತು ನವಜೀವನ ಸಮಿತಿಯ ಸ್ವಯಂ ಸೇವಕಿ ಶೋಭಾ , ನವ ಜೀವನ ಸಮಿತಿಯ ಸ್ವಯಂಸೇವಕರಾದ ರಮೇಶ್ , ನಾರಾವಿ ವಲಯದ ಒಕ್ಕೂಟದ ಅಧ್ಯಕ್ಷರು ಹಾಗೂ ನಾರಾವಿಯ ಸೇವಾ ಪ್ರತಿನಿಧಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.