ಉಜಿರೆ : ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಸೆ.25 ರಂದು ಔಷಧ ತಜ್ಞರ ದಿನಾಚರಣೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ.
ದ. ಕ. ಜಿಲ್ಲೆ ಮಂಗಳೂರು ವೃತ್ತ 1ರ ಸಹಾಯಕ ಔಷಧ ನಿಯಂತ್ರಕ ಉದಯ ಕಿಶೋರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ವಹಿಸಲಿದ್ದಾರೆ. ಸುನೀಲ್.ಎಸ್. ಚಿಪ್ಲಾಕರ್, ದ. ಕ.ಸೌತ್ ಕೆನರಾ ಡಿಸ್ಟ್ರಿಕ್ಟ್ ಕೆಮಿಸ್ಟ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಸುಜೀತ್ ಭೀಡೆ, ಕಾರ್ಯದರ್ಶಿ ಗುರುಚರಣ್ ರಾವ್ ಭಾಗವಹಿಸಲಿದ್ದಾರೆ.