ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಮೈರಲ್ಕೆ ಓಡಿಲ್ನಾಳ ಇದರ ಧ್ವಜಸ್ಥ0ಭ ಮುಹೂರ್ತ ಮತ್ತು ನಾಗಶಿಲೆ ಜಲಾಧಿವಾಸ ಕಾರ್ಯಕ್ರಮ ಶುಭ ಮುಹೂರ್ತದಲ್ಲಿ ನೀಲೇಶ್ವರದ ತಂತ್ರಿಗಳಾದ ಶ್ರೀ ಪದ್ಮನಾಭ ಇವರ ನೇತೃತ್ವದಲ್ಲಿ ನ 6ರಂದು ನೆರವೇರಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗಿರೀಶ್ ಕುದ್ರೆ0ತಾಯ ಧರ್ಮಸ್ಥಳ ಮತ್ತು ತುಳು ಶಿವಳ್ಳಿ ಸಂಘ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಶ್ರೀರಾಘವೇಂದ್ರ ಬೈಪಡಿತ್ತಾಯ ಇವರು ಭಾಗವಹಿಸಿದ್ದರು.
ಓಡಿಲ್ನಾಳ ಧರ್ಮೋತಾನ ಟ್ರಸ್ಟಿನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.