ಉರ್ಲಾಂಡಿ: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರದೀಪ್ ಹೆಗ್ಡೆಯವರ ಮನೆಗೆ ತಗುಲಿದ ಬೆಂಕಿ

0

ಪುತ್ತೂರು: ಉರ್ಲಾಂಡಿಯಲ್ಲಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರದೀಪ್ ಹೆಗ್ಡೆಯವರ ಮನೆಗೆ ಬೆಂಕಿ ತಗುಲಿದ ಘಟನೆ ಜ.24ರ ರಾತ್ರಿ ನಡೆದಿದೆ. ಉರ್ಲಾಂಡಿ ನಿವಾಸಿ ಪ್ರದೀಪ್ ಹೆಗ್ಡೆಯವರ ತಾಯಿ ವಿಮಲ ಹೆಗ್ಡೆಯವರ ಹೆಸರಿನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದ್ದು, ಜ.24ರಂದು ಮನೆ ಮಂದಿ ರಾತ್ರಿ ದೇವಸ್ಥಾನಕ್ಕೆ ತೆರಳಿದ್ದು ಅವರು ಮನೆಗೆ ವಾಪಾಸಾದ ವೇಳೆ ಮನೆಯೊಳಗೆ ಬೆಂಕಿ ಕಾಣಿಸಿತ್ತು. ತಕ್ಷಣ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ಜ್ವಾಲೆಗೆ ಮನೆಯೊಳಗಿದ್ದ ಕಪಾಟು ಮತ್ತು ಪಕ್ಕಾಸಿಗೆ ಹಾನಿಯಾಗಿದೆ. ಕಪಾಟಿನೊಳಗಿದ್ದ ದಾಖಲೆ ಪತ್ರ, ಬಟ್ಟೆ, ನಗದು ಭಸ್ಮಗೊಂಡಿದೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಸಭಾ ಸ್ಥಳೀಯ ಸದಸ್ಯ ಸಂತೋಷ್ ಕುಮಾರ್ ಬೊಳುವಾರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here