![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಉತ್ತಮ ಸೇವೆಗೆ ಪುರಸ್ಕಾರ-ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಲಂಚ, ಭ್ರಷ್ಟಾಚಾರ ಮುಕ್ತ ನಮ್ಮ ಊರು’ ಅಭಿಯಾನಕ್ಕೆ ಬೆಂಬಲ ಸೂಚಿಸಿ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ನೇತೃತ್ವದಲ್ಲಿ ಕೃಷ್ಣನಗರ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಸಲಾಯಿತು. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂದು ಘೋಷಣೆ ಕೂಗಲಾಯಿತಲ್ಲದೆ, ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡಲಾಯಿತು.
ಈ ವೇಳೆ ಮಾತನಾಡಿದ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವುರವರು ಸುದ್ದಿ ಬಳಗ ನಡೆಸುವ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಿದೆ. ಇದೀಗ ಭ್ರಷ್ಟಾಚಾರದ ವಿರುದ್ಧ ನಡೆಸಲಾಗುತ್ತಿರುವ ಆಂದೋಲನವೂ ಯಶಸ್ವಿಯಾಗುತ್ತದೆ, ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ನಾರಾಯಣ ಗೌಡ ಬಡಾವು, ಆಶಿಕ್ ತಾರಿಗುಡ್ಡೆ , ಮೋನಪ್ಪ ಪೂಜಾರಿ ಬಡಾವು, ಹರೀಶ್ ಆಚಾರ್ಯ ಕೃಷ್ಣ ನಗರ, ವಿಶ್ವನಾಥ ಆಚಾರ್ಯ ಕೆಮ್ಮಾಯಿ ಕೃಷ್ಣ ನಗರ, ವಲೇರಿಯನ್ ಡಿ’ ಸೋಜಾ ಬನ್ನೂರು, ದೇವಪ್ಪ ಕುಲಾಲ್ ಕೃಷ್ಣನಗರ, ಸುದರ್ಶನ್ ಕೃಷ್ಣ ನಗರ, ಅಶೋಕ್ ಕುಮಾರ್ ಬಡಾವು ಹಾಗೂ ಬಶೀರ್ ದಾರಂದಕುಕ್ಕು ಉಪಸ್ಥಿತರಿದ್ದರು. ಸುದ್ದಿ ಬಳಗದ ವಸಂತ ಸಾಮೆತ್ತಡ್ಕ, ಮೋಹನ್ ಶೆಟ್ಟಿ ಮತ್ತು ಫಾರೂಕ್ ಶೇಕ್ ಮುಕ್ವೆ ಸಹಕರಿಸಿದರು.