ಪುತ್ತೂರು : ಆಲಡ್ಕ ಶ್ರೀಸದಾಶಿವ ದೇವರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕೆಮ್ಮಿಂಜೆ ಯಕ್ಷಶ್ರೀ ಹವ್ಯಾಸಿ ಬಳಗದಿಂದ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರರಾಗಿ ಪುರುಷೋತ್ತಮ ಭಟ್, ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಜಯಪ್ರಕಾಶ್ ನಾಕೂರು ಸಹಕರಿಸಿದರು. ಮುಮ್ಮೇಳದಲ್ಲಿ ಮಧೂರು ಮೋಹನ ಕಲ್ಲೂರಾಯ, ವೀಣಾ ಸರಸ್ವತಿ ನಿಡ್ವಣ್ಣಾಯ, ವೀಣಾನಾಗೇಶ ತಂತ್ರಿ, ಆಶಾಲತಾ ರಾಮಕುಂಜ, ಸುಧಾ ಸುಬ್ರಹ್ಮಣ್ಯ ಭಾಗವಹಿಸಿದರು.