ಕಡಬ: ತನ್ನ ಪಟ್ಟಾ ಜಾಗದಲ್ಲಿ ಹಾಕಿದ್ದ ಬೇಲಿಯನ್ನು ಸ್ಥಳೀಯರೊಬ್ಬರು ತೆರವುಗೊಳಿಸುವ ವೇಳೆ ಆಕ್ಷೇಪಿಸಿ ಸ್ಥಳಕ್ಕೆ ಹೋದ ಸಂದರ್ಭ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಸುಬ್ರಹ್ಮಣ್ಯದ ಮಹಿಳೆಯೊಬ್ಬರು ಕಡಬ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸುಬ್ರಹಣ್ಯ ಗ್ರಾಮದ ಕಮಲ ನಾಯ್ಕ್ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆ. ಸ್ಥಳೀಯ ವ್ಯಕ್ತಿ ತನ್ನ ಜಾಗದಲ್ಲಿ ಅಳವಡಿಸಿರುವ ಬೇಲಿಯನ್ನು ಕಿತ್ತೆಸೆದ ವೇಳೆ ಸ್ಥಳಕ್ಕೆ ಹೋದಾಗ ಸುಮಾರು ಹತ್ತರಿಂದ ಹದಿನೈದು ಮಂದಿಯ ತಂಡ ಬೆದರಿಸಿ ಹಲ್ಲೆ ಮಾಡಿದ್ದಾರೆಂದು ಅರೋಪಿಸಲಾಗಿದೆ.
ಮಹಿಳೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ರವಾನಿಯಾಗಿದೆ ಎಂದು ತಿಳಿದು ಬಂದಿದೆ.