ಕಡಬ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ- ದರ್ಶನ ಬಲಿ ಉತ್ಸವ

0

ಕಡಬ: ಇಲ್ಲಿನ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ- ದರ್ಶನ ಬಲಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಫೆ.3ರಂದು ನಡೆಯಿತು.

ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ,ಕಲಶ ಪೂಜೆ,ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗ ದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನ ಬಳಿಕ ಯಕ್ಷಶ್ರೀ ಹವ್ಯಾಸಿ ಬಳಗದ ಮಹಿಳಾ ಕಲಾವಿದರು ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.

ದರ್ಶನ ಬಲಿ ಉತ್ಸವ
ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ ಉತ್ಸವ ನಡೆದು ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನಡೆಯಿತು. ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತ್ರತ್ವದಲ್ಲಿ ಸಚ್ಚಿಂದ್ರ ಕೃಷ್ಣ ವೈದಿಕ ನೆರವೇರಿಸಿದರು, ಪ್ರಧಾನ ಅರ್ಚಕರಾದ ಕೇಶವ ಬೈಪಾಡಿತ್ತಾಯ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಪ್ರಸಾದ್ ಕೆದಿಲಾಯ ಸೇರಿದಂತೆ ಅರ್ಚಕ ವೃಂದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು, ಗೌರವಾಧ್ಯಕ್ಷ ಸನತ್ ಕುಮಾರ್ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾದ ಮುತ್ತುಕುಮರ್, ಸದಸ್ಯರಾದ ಗಂಗಾಧರ್, ಕೆ.ಜಿ. ಶಾಂತಿ,ವಿಜಯಕುಮಾರಿ,ರಾಮಚಂದ್ರ, ಪ್ರಸಾದ್ ಗೌಡ,ಮೊನಪ್ಪ ಗೌಡ ನಾಡೋಳಿ,ಪುರುಷೋತ್ತಮ ಪ್ರಮುಖರಾದ ಕೃಷ್ಣ ಶೆಟ್ಟಿ, ಸುಂದರ ಗೌಡ ಮಂಡೆಕರ, ಸೀತಾರಾಮ ಗೌಡ ಪೊಸವಳಿಕೆ, ಸತೀಶ್ ನಾಯ್ಕ್ ಮೇಲಿನ ಮನೆ, ಸತೀಶ್ ನಾಯಕ್, ಸೇರಿದಂತೆ ಹಲವರು ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here