ಸರ್ವೆ: ಕಲ್ಪಣೆ ಶಾಲಾ ವಿದ್ಯಾರ್ಥಿಗೆ ಕಾರು ಡಿಕ್ಕಿ-ಗಾಯ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯೋರ್ವಗೆ ಕಾರು ಡಿಕ್ಕಿಯಾಗಿ ಗಾಯಗೊಂಡಿರುವ ಘಟನೆ ಫೆ.9ರಂದು ನಡೆದಿದೆ. ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ನೇರೋಳ್ತಡ್ಕ ಸಮೀಪದ ವಿದ್ಯಾರ್ಥಿಗೆ ಓಮ್ನಿ ಕಾರು ಡಿಕ್ಕಿಯಾಗಿದ್ದು ಕೂಡಲೇ ವಿದ್ಯಾರ್ಥಿಯನ್ನು ಅದೇ ಓಮ್ನಿ ಕಾರಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇಲ್ಲಿ ಈ ಹಿಂದೆಯೂ ಕೆಲವು ಅಪಘಾತಗಳು ಸಂಭವಿಸಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಶಾಲಾ ಗೇಟಿನ ಮುಂಭಾಗದ ರಸ್ತೆಯಲ್ಲಿ ಬೇರಿಕೇಡ್ ಅಳವಡಿಸಬೇಕೆಂಬ ಆಗ್ರಹ ಸ್ಥಳೀಯವಾಗಿ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here