ಪುತ್ತೂರು : ಎಂ.ಟಿ ರೋಡ್ನಲ್ಲಿರುವ ಎ.ಎಚ್. ಹಿಂದೂಸ್ಥಾನ್ ಸಿಟಿ ಮಾರ್ಕೆಟ್ನಲ್ಲಿ ಪುರುಷರ ಸಿಧ್ಧ ಉಡುಪುಗಳ ಮಳಿಗೆ ಇಚ್ಚ ಇಂಟರ್ನ್ಯಾಷನಲ್ ಶುಭಾರಂಭಗೊಂಡಿತು.
ಸಾಲ್ಮರ ಹಾಜಿ ಸಯ್ಯದ್ ಮುಹಮ್ಮದ್ ತಂಙಳ್ ಮತ್ತು ಹಾಜಿ ಉಸ್ತಾದ್ ಪಿ.ಎಮ್. ಉಮ್ಮರ್ ದಾರಿಮಿರವರು ದುವಾ ಆಶೀರ್ವಚನ ನೀಡಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ನಗರಸಭಾಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ಎಸ್ಡಿಪಿಐ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್, ಸಾಲ್ಮರ ಸಯ್ಯದ್ ಮಲೆ ಜುಮ್ಮಾ ಮಸೀದಿ ಅಧ್ಯಕ್ಷ ನೂರುದ್ದೀನ್ ಸಾಲ್ಮರ, ಬೆಂಗಳೂರು ಇಚ್ಚ ಇಂಟರ್ನ್ಯಾಷನ್ನ ಎಮ್ಡಿ ಶಂಸುದ್ದೀನ್ ಪಿ.ಎಸ್., ಪುತ್ತೂರು ಬ್ರೈಟ್ವೇ ಎಮ್ಡಿ ಜುಬೈರ್ ಪೊಳ್ಯ, ಪುತ್ತೂರು ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ವಕೀಲ ಜಯರಾಮ ರೈ, ಕಬೀರ್ ಸಾಲ್ಮರ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಮಾಲಕರಾದ ನವಾಝ್ ಪಿ.ಎಸ್. ಸಾಲ್ಮರರವರು ಅತಿಥಿಗಳನ್ನು ಸ್ವಾಗತಿಸಿದರು. ಅಝರ್ ಸಾಲ್ಮರ ಸಹಕರಿಸಿದರು.