ಪುತ್ತೂರು:ಪುತ್ತೂರಿನ ಹಿರಿಮೆಗೆ ಮತ್ತೊಂದು ಗರಿಮೆ ಎಂಬಂತೆ ನಗರದ ಪಡೀಲ್ನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ `ಸಾರಾ ಅಪಾರ್ಟ್ಮೆಂಟ್’ ಫೆ.20ರಂದು ಲೋಕಾರ್ಪಣೆಗೊಂಡಿತು.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲು ಕಟ್ಟೆಯ ಬಳಿಯಿಂದ ರೈಲು ನಿಲ್ದಾಣ ರಸ್ತೆಯ ಸುಮಾರು ೨೫೦ ಮೀಟರ್ ದೂರದಲ್ಲಿ ನೂತನ ವಸತಿ ಸಮುಚ್ಚಯ ನಿರ್ಮಾಣಗೊಂಡಿದೆ. ಪುತ್ತೂರು ನಗರಕ್ಕೆ ಹತ್ತಿರವಾಗಿ ನಿರ್ಮಾಣಗೊಂಡಿರುವುದಲ್ಲದೆ ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪಟ್ಟಣಕ್ಕೆ ಅತೀ ಹತ್ತಿರವಾಗಿ ನಿರ್ಮಾಣಗೊಂಡಿದೆ. ಎಲ್ಲಾ ರೀತಿಯಲ್ಲಿಯೂ ಈ ಅಪಾರ್ಟ್ಮೆಂಟ್ ಹತ್ತಿರವಾಗಿ ಸಂಪರ್ಕ ಕಲ್ಪಿಸುತ್ತಿದೆ.
ಪ್ರಥಮ ಹಂತದಲ್ಲಿ ಒಟ್ಟು ಎಂಟು ಪ್ಲ್ಯಾಟುಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಒಂದೊಂದು ಪ್ಲ್ಯಾಟುಗಳು ಸುಮಾರು 1000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪ್ರತಿ ಪ್ಲಯಾಟುಗಳಲ್ಲಿಯು ಡಬ್ಬಲ್ ಬೆಡ್ ರೂಂ, ಕಿಚನ್, ಹಾಲ್, ಡೈನಿಂಗ್ ರೂಂಗಳು, ಎಟಾಚ್ಡ್ ಬಾತ್ ರೂಂ ಹಾಗೂ ಸಾಮಾನ್ಯ ಬಾತ್ರೂಂಗಳನ್ನು ಒಳಗೊಂಡಿದೆ. ದಿನದ ೨೪ ಗಂಟೆಯು ನೀರಿನ ಸೌಲಭ್ಯ, ವಿದ್ಯುತ್, ಸೋಲಾರ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುರಕ್ಷತೆಗಾಗಿ ಸೆಕ್ಯೂರಿಟಿ ಗಾರ್ಡ್ ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ಲ್ಯಾಟ್ ನಿವಾಸಿಗಳಿಗೆ ಕಾರ್ಯಕ್ರಮಗಳ ಆಯೋಜನೆಗಾಗಿ ಹಾಲ್ನ ಸೌಲಭ್ಯ, ವಿಶಾಲವಾದ ಪಾರ್ಕಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ 7337647777 ನಂಬರನ್ನು ಸಂಪರ್ಕಿಸುವಂತೆ ಮ್ಹಾಲಕ ಮಹಮ್ಮದ್ ಶಾಫಿ ಬೊಳುವಾರು ತಿಳಿಸಿದ್ದಾರೆ.
ನೂತನ ಅಪಾರ್ಟ್ಮೆಂಟ್ನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಶುಭ ಹಾರೈಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್, ಎಪಿಎಂಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕರಾದ ವಿ.ಎಚ್.ಎ ಶಕೂರ್ ಹಾಜಿ, ಕಾರ್ಯದರ್ಶಿ ರಶೀದ್ ಹಾಜಿ, ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ರಹಿಮಾನ್, ಸಲ್ಮಾನ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.