ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸಿಟಿ ಸಮಿತಿ ವತಿಯಿಂದ ಅಜ್ಮೀರ್ ಕ್ವಾಜಾ ಉರೂಸ್ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಣ್ಣುಹಂಪಲು ವಿತರಿಸಲಾಯಿತು. ಸಿಟಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಸ್ಲಿಂ ಜಮಾಅತ್ ಜಿಲ್ಲಾ ನಾಯಕ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಸಾಬಕುಂಞಿ ಪುತ್ತೂರು, ಅಬೂಬಕ್ಕರ್, ಸಿಟಿ ಮುಸ್ಲಿಂ ಜಮಾತ್ ಇದರ ಅಝೀಝ್ ಕೆಮ್ಮಾಯಿ, ಸಂಪ್ಯ ಎಸ್ವೈಎಸ್ ಇದರ ಅಝೀಝ್ ಸಂಪ್ಯ ಉಪಸ್ಥಿತರಿದ್ದರು.
Home ಚಿತ್ರ ವರದಿ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸಿಟಿ ಸಮಿತಿ ವತಿಯಿಂದ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣುಹಂಪಲು ವಿತರಣೆ