ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಸುಳ್ಯ ತಾಲೂಕು ಸಮಿತಿ ಇದರ ವತಿಯಿಂದ ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ಪಂಚಾಯತ್ ನೌಕರರ ರಾಜ್ಯ ವ್ಯಾಪ್ತಿಯ ಹೋರಾಟ ದ ಕುರಿತು ಪೂರ್ವಭಾವಿ ಸಭೆ ನಡೆಯಿತು. ಪಂಚಾಯತ್ ನೌಕರರ ಸಮಸ್ಯೆ ಗಳಿಗೆ ಸಂಘ ದ ವತಿಯಿಂದ ಸರ್ಕಾರ ಕ್ಕೆ ಹಲವಾರು ಮನವಿ ಗಳನ್ನು ನೀಡಿದರೂ ಇದುವರೆಗೂ ಯಾವುದೇ ಸ್ಪಂದನೆ ಇಲ್ಲದೇ ಇರುವುದರಿಂದ ರಾಜ್ಯ ವ್ಯಾಪ್ತಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಸುಳ್ಯ ತಾಲೂಕು ನಿಂದ ಹೆಚ್ಚಿನ ಸಂಖ್ಯೆ ಯಲ್ಲಿ ನೌಕರರು ಭಾಗವಹಿಸುವುದು ಮತ್ತು ಪ್ರತಿಭಟನೆ ಗೆ ಸಂಪೂರ್ಣ ಸಹಕಾರ ನೀಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಹಾಗೂ ಈ ಕುರಿತು ವಲಯ ವಾರು ಹೋರಾಟ ಸಮಿತಿ ಗಳನ್ನು ರಚಿಸಲಾಯಿತು.
ಸಭೆ ಯಲ್ಲಿ ಸುಳ್ಯ ತಾಲೂಕು ಸಮಿತಿ ಯ ಅಧ್ಯಕ್ಷರಾದ ನೇತ್ರಾವತಿ ಮರ್ಕಂಜ ಕಾರ್ಯದರ್ಶಿ ಗಿರಿಧರ ಕಳಂಜ ಹಾಗೂ ಜಿಲ್ಲಾ ಸಮಿತಿ ಯ ಸದಸ್ಯರಾದ ಯಶವಂತ ಅಮರ ಮುಡ್ನೂರು ಹಾಗೂ ತಾಲೂಕು ಹೋರಾಟ ಸಮಿತಿ ಯ ಅಧ್ಯಕ್ಷರಾದ ಪುಟ್ಟರಾಜು ಮರ್ಕಂಜ ಹಾಗೂ ಪದಾಧಿಕಾರಿಗಳು ಸದಸ್ಯರು ಗಳು ಉಪಸ್ಥಿತರಿದ್ದರು.