ಕಡ್ಯ ಕೊಣಾಜೆಯಲ್ಲಿ  ಸಮರ ಸೌಗಂಧಿಕೆ ತಾಳಮದ್ದಳೆ

0

ಪುತ್ತೂರು: ಕಡಬ ಸಮೀಪದ ಕಡ್ಯಾ  ಕೊಣಾಜೆ ನಿವಾಸಿ ವಾಸುದೇವ ಭಟ್ ಮತ್ತು ವೀಣಾ ಭಟ್ ದಂಪತಿಗಳ 70 ನೇ ವರ್ಷದ ಭೀಮರಥ ಶಾಂತಿಯ ಪ್ರಯುಕ್ತ  ಸ್ವಗೃಹದಲ್ಲಿ ಯಕ್ಷಶ್ರೀ ಹವ್ಯಾಸಿ ಬಳಗದ ವತಿಯಿಂದ ಸಮರ ಸೌಗಂಧಿಕೆ ತಾಳಮದ್ದಳೆ  ನಡೆಯಿತು.  ಹಿಮ್ಮೇಳದಲ್ಲಿ  ಭಾಗವತರಾಗಿ ಭವ್ಯಶ್ರೀ ಹರೀಶ್, ಚೆಂಡೆ   ಕೇಶವ ಬೈಪಡಿತ್ತಾಯ, ಮದ್ದಳೆ  ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ವೀಣಾ ನಾಗೇಶ್ ತಂತ್ರಿ, ಗೀತಾ ಕುದ್ದಣ್ಣಾಯ, ಆಶಾಲತಾ ವಿ.ಕೆ, ಜೋತ್ಸ್ನಾ ಶ್ರೀನಿಧಿ ಕುದ್ರೆತ್ತಾಯ ಭಾಗವಹಿಸಿದರು.

LEAVE A REPLY

Please enter your comment!
Please enter your name here