ಸುಳ್ಯದ ಅಜ್ಜಾವರ ನೆಲ್ತಿಲದಲ್ಲಿ ಪ್ರಗತಿಪರ ಕೃಷಿಕರಾಗಿದ್ದು ಪ್ರಸ್ತುತ ಮಂಗಳೂರು ನೆಲೆಸಿರುವ ನೆಲ್ತಿಲ ರಂಗನಾಥ ರೈ ಯವರ ವೈಕುಂಠ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ಅ.22 ರಂದು ಮಂಗಳೂರು ಟಿವಿ ರಮಣ ಪೈ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ರಿಯರಾದ ಶ್ರೀಮತಿ ಲತಾ ಪದ್ಮನಾಭ ರೈ,ಶ್ರೀಮತಿ ಗೀತಾ ರತ್ನಾಕರ ರೈ,ಶ್ರೀಮತಿ ಪುಷ್ಪ ಸತೀಶ್ ಶೆಟ್ಟಿ ಎಲ್ಲರನ್ನೂ ಬರಮಾಡಿಕೊಂಡರು.
ಕುಟುಂಬಸ್ಥರು ಮತ್ತು ಸಮಾಜದ ಗಣ್ಯರು ಹಾಗೂ ಕುಟುಂಬದ ಹಿತೈಷಿಗಳು ನುಡಿ ನಮನ ಸಲ್ಲಿಸಿದರು.