ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆ ಪದವು ಚೊಕ್ಕಾಡಿ
ಇದರ ವತಿಯಿಂದ
6ನೇ ವರುಷದ ಗೋ ಪೂಜೆಯು ನ.5 ರಂದು ನಡೆಯಲಿದ್ದು ಇದರ
ಕರಪತ್ರ ಬಿಡುಗಡೆಯು
ಅ. 23 ರಂದು ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ವಠಾರದಲ್ಲಿ ನಡೆಯಿತು.
ನಿವೃತ್ತ ಪ್ರಾಂಶುಪಾಲ
ಬಾಲಕೃಷ್ಣ ಬೊಳ್ಳೂರು ಪ್ರಾರ್ಥಿಸಿ ಬಿಡುಗಡೆ ಗೊಳಿಸಿದರು. ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸುದರ್ಶನ್ ಪದವು ಕಾರ್ಯಕ್ರಮದ ವಿವರ ತಿಳಿಸಿದರು. ಅತಿಥಿಗಳಾಗಿ ಚೊಕ್ಕಾಡಿ ಉಳ್ಳಾಕುಲು ವ್ಯವಸ್ಥಾಪನಾ ಸಮಿತಿ ಸದಸ್ಯ ಕೇಶವ ಕರ್ಮಜೆ,ವೆಂಕಟ್ರಮಣ ಗೌಡ ಕರ್ಮಾಜೆ, ಅಮರಮುಡ್ನೂರು ಪಂ. ಸದಸ್ಯೆ ಸೀತಾ.ಹೆಚ್, ರೂಪೇಶ್ ಪೂಜಾರಿಮನೆ, ಸುಳ್ಯನಗರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬೋಜಪ್ಪ ಕೆನಡ್ಕ, ಬಜರಂಗದಳ ಸಹಯೋಜಕ್ ಸತೀಶ್ ಪದವು,ಶರಣ್ ಕರ್ಮಜೆ, ವರ್ಷಿತ್ ಚೊಕ್ಕಾಡಿ,ನವೀನ ಕಣಿಪಿಲ,ಕಾರ್ತಿಕ್ ಕೊರತ್ಯಡ್ಕ,ಮಹೇಶ್ ಪದವು,ರಾಜೇಶ್ ಪೈಲಾರು, ಯಕ್ಷಿತ್ ಬೊಳ್ಳೂರು,ಪ್ರವೀಣ್ ಪದವು,ಜೈದೀಪ್ ಕೊರತ್ಯಡ್ಕ,ರಾಜೇಶ್ ಪೈಲೂರು ಉಪಸ್ಥಿತರಿದ್ದರು.