ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ ಸೀತಾರಾಮ ರೈ ಸವಣೂರು ಪುನರಾಯ್ಕೆ

0

ಕೆ ಸೀತಾರಾಮ ರೈ ಸವಣೂರು

 

ಎನ್.ಸುಂದರ್ ರೈ ಸವಣೂರು

ಪುತ್ತೂರು:ಪುತ್ತೂರು, ಸುಳ್ಯ, ಕಡಬಲ್ಲಿ ಒಟ್ಟು 12 ಶಾಖೆಗಳನ್ನೊಳಗೊಂಡು ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ವ್ಯವಹರಿಸುತ್ತಿರುವ ಪ್ರತಿಷ್ಠಿತ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 2022-23ರಿಂದ ಮುಂದಿನ 5 ವರ್ಷಗಳ ಸಾಲಿನ ಆಡಳಿತ ಮಂಡಳಿಗೆ ಕೆ ಸೀತಾರಾಮ ರೈ ಸವಣೂರು ಅವರು ಪುನರಾಯ್ಕೆ ಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಎನ್.ಸುಂದರ್ ರೈ ಸವಣೂರು ಅವರು ಆಯ್ಕೆಗೊಂಡಿದ್ದಾರೆ.

 


ಮಾ.18 ರಂದು ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಸಂಧರ್ಭದಲ್ಲಿ ನಿರ್ದೇಶಕರಾದ ಡಾ.ರಾಜೇಶ್ ಎಸ್ ರೈ ಮಂಗಳೂರು, ಬಿ.ಮಹಾಬಲ ರೈ ಬೋಳಂತೂರು, ಎನ್.ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಕೇನ್ಯ ರವೀಂದ್ರನಾಥ ಶೆಟ್ಟಿ, ಎಸ್.ಎಂ.ಬಾಪು ಸಾಹೇಬ್ ಸುಳ್ಯ, ಎನ್.ರಾಮಯ್ಯ ರೈ ತಿಂಗಳಾಡಿ, ವಿ.ವಿ.ನಾರಾಯಣ ಭಟ್ ನರಿಮೊಗರು, ಚಿಕ್ಕಪ್ಪ ನಾಕ್ ಅರಿಯಡ್ಕ, ಬಿ.ಸೀತಾರಾಮ ಶೆಟ್ಟಿ ಮಂಗಳೂರು, ಜೈರಾಜ್ ಭಂಡಾರಿ ನೋಣಾಲು, ಎಂ.ಮಹಾದೇವ್ ಮಂಗಳೂರು, ಪೂರ್ಣಿಮಾ ಎಸ್.ಆಳ್ವ ಮಂಗಳೂರು ಮತ್ತು ಯಮುನಾ ಎಸ್ ರೈ ಗುತ್ತುಪಾಲ್‌ರವರು ಉಪಸ್ಥಿತರಿದ್ದರು‌. ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಕನ್ಯಾರವರು ಚುನಾವಣಾಧಿಕಾರಿಯಾಗಿದ್ದರು.

ಬೀಳ್ಕೊಡುಗೆ:
೨೦೧೨ ರಿಂದ ಸಂಘಸಲ್ಲಿ ನಿರಂತರವಾಗಿ ನಿರ್ದೇಶಕರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಕೆ ಶಂಕರ್ ನಾಕ್ ಅವರನ್ನು ಸಂಘದ ವತಿಯಿಂದ ಬೀಳ್ಕೊಡಲಾಯಿತು‌

LEAVE A REPLY

Please enter your comment!
Please enter your name here