ಪಂಜ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ

0

 

ಪಂಜ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಅ.29 ರಂದು ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾ ಮಂದಿರದಲ್ಲಿ ಜರಗಿತು.

ಮುಖ್ಯ ಅತಿಥಿಯಾದ
ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಲಯನ್ಸ್ ರಾಯಭಾರಿ ಜಯಪ್ರಕಾಶ್ ರೈ, ರೀಜಿನಲ್ ಚೇರ್ ಪರ್ಸನ್ ಡಾ.ಸಿದ್ದಲಿಂಗ ,ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ ಯವರ ಪತಿ ಸಚಿತ್ ಕುಮಾರ್ ರೈ, ಕ್ಲಬ್ ನ ಹಾಗೂ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜಾಕೆ, ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ, ಕೋಶಾಧಿಕಾರಿ ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ ರವರನ್ನು ಸನ್ಮಾನಿಸಲಾಯಿತು.

*ಸೇವಾ ಕಾರ್ಯ:*
ಸೇವಾ ಕಾರ್ಯಕ್ರಮದಲ್ಲಿ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ‌ ನಾಗೇಶ್ ಕಿನ್ನಿಕುಮೇರಿ ಪ್ರಾಯೋಜಕತ್ವದಲ್ಲಿ ಮಿಕ್ಸಿ ನೀಡಲಾಯಿತು ಮತ್ತು ಕುಂತೂರು ಪದವು ಸೈಂಟ್ ಜೋಸೆಫ್ ಶಾಲೆಗೆ ರೂ.5000 ದೇಣಿಗೆಯನ್ನು ವಾಸುದೇವ ಮೇಲ್ಪಾಡಿ‌ಯವರ ಪ್ರಾಯೋಜಕತ್ವದಲ್ಲಿ ಪಂಜ ಲಯನ್ಸ್ ಕ್ಲಬ್ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ದಿಲೀಪ್ ಬಾಬ್ಲುಬೆಟ್ಟು ವೇದಿಕೆಗೆ ಆಹ್ವಾನಿಸಿದರು. ಪುರುಷೋತ್ತಮ ದಂಬೆಕೋಡಿ ಸ್ವಾಗತಿಸಿದರು.ಮನು ಪ್ರಾರ್ಥಿಸಿದರು. ವಾಸುದೇವ ಮೇಲ್ಪಾಡಿ ಧ್ವಜ ವಂದನೆ ಮಾಡಿದರು. ನಾಗೇಶ್ ಕಿನ್ನಿಕುಮೇರಿ ವರದಿ ವಾಚಿಸಿದರು. ಕರುಣಾಕರ ಎಣ್ಣೆಮಜಲು ವಂದಿಸಿದರು.ಇತ್ತೀಚೆಗೆ ನಿಧನರಾದರ ಕಡಬ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸ್ಕರಿಯ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here