![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಅಕಾಲಿಕ ನಿಧನಕ್ಕೆ ಉದ್ಯಮಿ ಹರೀಶ್ ಕಾಮತ್ ಸಂತಾಪ
ಹೃದಯಾಘಾತದಿಂದ ನಿಧನರಾದ ಸುಬ್ರಹ್ಮಣ್ಯ ಗ್ರಾಂ.ಪಂ ಪಿಡಿಒ ಯು.ಡಿ ಶೇಖರ್ ಅವರ ನಿಧನ ಕ್ಕೆ ಸುಬ್ರಹ್ಮಣ್ಯದ ಉದ್ಯಮಿ ಹರೀಶ್ ಕಾಮತ್ ತೀವ್ರ ಸಂತಾಪ ಸೂಚಿಸಿದ್ದಾರೆ. ಶೇಖರ್ ಅವರ ನಿಧನದಿಂದ ಸುಬ್ರಹ್ಮಣ್ಯದ ಅಭಿವೃದ್ಧಿಯ ವೇಗ ಕುಂಠಿತವಾಗಿದೆ. ಬಡವರ ಪರ ವಿಶೇಷ ಆಸಕ್ತಿಯಿಂದ ಕೆಲಸ ಮಾಡುತಿದ್ದ ಅವರ ಕಾರ್ಯ ವೈಖರಿ ಮೆಚ್ಚುವಂತದ್ದು.
ಈ ವರ್ಷ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಸಂಘಟಿಸಿ ತಾಲೂಕಿನ ನೂರಾರು ಮಾಜಿ ಯೋಧರನ್ನು ಸನ್ಮಾನಿಸಿದ್ದು ಅವಸ್ಮರಣೀಯ. ಎಲ್ಲರೊಂದಿಗೂ ಆತ್ಮೀಯತೆಯನ್ನು ಹೊಂದಿದ್ದ ಅವರು ಅಜಾತ ಶತ್ರುವಾಗಿದ್ದರು ಎಂದು ಹರೀಶ್ ಕಾಮತ್ ಯು.ಡಿ ಶೇಖರ್ ಅವರ ಗುಣಗಾನ ಮಾಡಿದ್ದಾರೆ.