ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ-ಬ್ರಹ್ಮಕಲಶೋತ್ಸವದ ಸಿದ್ಧತಾ ಸಭೆ

0

ಪುತ್ತೂರು: ಮೇ 6 ಮತ್ತು 7ರಂದು ನಡೆಯಲಿರುವ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಎ.10ರಂದು ದೇವಳದ ವಠಾರದಲ್ಲಿ ನಡೆಯಿತು. ಬಳಿಕ ದಶಂಬರ್ 20ರಿಂದ 25ರವರಗೆ  ನಡೆಯಲಿರುವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಿದ್ಧತೆಯ ಕುರಿತು ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ನೆಕ್ಕಿಲಾಡಿ ಗ್ರಾಮಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜರಗಿತು.


ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾ ಶಾಂತಿನಗರರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೊಕ್ತೇಸರರಾದ ಪುರುಷೋತ್ತಮ ಪ್ರಭು ಹನಂಗೂರು, ವಸಂತ ಕಾಮತ್ ಪರನೀರು, ರಾಜೇಶ್ ಶಾಂತಿನಗರ, ರಮೇಶ್ ಗೌಡ ಬೇರಿಕೆ, ಬ್ರಹ್ಮಕಲಶೋತ್ಸವದ ಕೋರ್ ಕಮಿಟಿ ಸದಸ್ಯರಾದ ಗೋಪಾಲಕೃಷ್ಣ ಭಟ್ ನೆಕ್ಕಿಲಾಡಿ, ಸಪ್ನಾ ಜೀವನ್ ಶಾಂತಿನಗರ, ಪ್ರಿಯಾ ರಮೇಶ್ ಗೌಡ ಶಾಂತಿನಗರ, ಸಂಘ ಸಂಸ್ಥೆಗಳ ಪ್ರಮುಖರಾದ ಮೋಹನ ಪಕ್ಕಳ ಕುಂಡಾಪು, ಲಕ್ಷ್ಮಣ ಗೌಡ ಕಂಬಳದಡ್ಡ, ಉಮೇಶ್ ಪನಿತೋಟ, ಸೇಸಪ್ಪ ಶಾಂತಿನಗರ, ಶೇಖರ ಪೂಜಾರಿ ಜೇಡರಪಾಲು, ಸತೀಶ್ ಎ.ಎಸ್. ಶಾಂತಿನಗರ, ಭರತ್ ಕುಮಾರ್ ಶಾಂತಿನಗರ, ಪ್ರೀತಂ ಶೆಟ್ಟಿ ಬಿ.ಕೆ. ಶಾಂತಿನಗರ, ಉಪೇಂದ್ರ ಆಚಾರ್ಯ ಶಾಂತಿನಗರ, ದಿನೇಶ್ ಜೇಡರಪಾಲು, ಸಂದೀಪ್‌ ಕೆ. ಪೂಜಾರಿ ಶಾಂತಿನಗರ, ಮಾಧವ ನಾಯ್ಕ ಕಿನ್ನಿತಪಳಿಕ್ಕೆ, ದೀಪಕ್ ನಿಡ್ಯ, ಗೋಪಾಲಕೃಷ್ಣ ಗೌಡ ಕನಡಾರು, ಎಂ.ಕೆ.ಸುರೇಶ್ ಕನಡಾರು, ಶಿಲ್ಪಾ ಭಾರ್ಗವ ಆಚಾರ್ಯ ನೆಕ್ಕಿಲಾಡಿ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here