ತಿಂಗಳಾಡಿ: ಬಿ.ಜೆ.ಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರದ ವಿಶೇಷ ಸಭೆ

0

ಪುತ್ತೂರು:   ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ನರಿಮೊಗರು ಮಹಾಶಕ್ತಿ ಕೇಂದ್ರದ ಸಭೆಯು ಎ.9 ರಂದು ಶನಿವಾರ ಸಂಜೆ ಕೆದಂಬಾಡಿ ಪಂಚಾಯತ್ ಸಭಾಭವನ (ತಿಂಗಳಾಡಿ)ದಲ್ಲಿ ನಡೆಯಿತು.

 

ಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ನವೀನ್ ಪಡ್ನೂರು, ಪ್ರ. ಕಾರ್ಯದರ್ಶಿ ರತನ್ ರೈ ಕುಂಬ್ರ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಮೋಕ್ಷಿತ್ ಬಾಯಂಬಾಡಿ, ನರಿಮೊಗರು ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾ ಪ್ರಭಾರಿಯಾದ ಶಿಶಿರ್ ಪೆರ್ವೋಡಿ, ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಶೋಭಿತ್ ಕೆಮ್ಮಾರ, ಸದಸ್ಯರಾದ ಹರೀಶ್ ಮಿತ್ತೋಡಿ, ನರಿಮೊಗರು ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಸದಸ್ಯರಾದ ಗೌತಮ್ ಸರ್ವೆ, ಪದ್ಮಪ್ಪ ವೀರಮಂಗಲ, ಕೊಳ್ತಿಗೆ ಗ್ರಾಮದ ಎಕ್ಕಡ್ಕ ಬೂತ್ ನ ಯುವ ಮೋರ್ಚಾ ಸಹ ಸಂಚಾಲಕ್ ದಿನೇಶ್ ಕೆರೆಮೂಲೆ ಪಾಲ್ಗೊಂಡಿದ್ದರು.

ನರಿಮೊಗರು ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ಶೆಟ್ಟಿ ಪಟ್ಟೆ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಮಂಜುನಾಥ್ ದುಗ್ಗಳ ವಂದಿಸಿದರು.

LEAVE A REPLY

Please enter your comment!
Please enter your name here