ಪುತ್ತೂರು: ದಿ| ದಯಾನಂದ ಶೆಣ್ಯೆ ಯವರ ಪುತ್ರ ವರದರಾಜ ಶೆಣ್ಯೆ ಯವರ ಮಾಲಕತ್ವದ ಚಿನ್ನಾಭರಣಗಳ ಮಳಿಗೆ ಶೆಣೈ ಜ್ಯುವೆಲ್ಲರ್ಸ್ ,ಕೋರ್ಟು ರಸ್ತೆಯಲ್ಲಿರುವ ಎಂಎಸ್ ಶೆಣೈ ಕ್ಲಿನಿಕ್ ಬಳಿ ಎ.10ರಂದು ಪೂಜಾ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಮಾಲಕ ವರದರಾಜ್ ಶೆಣೈ ಅತಿಥಿಗಳನ್ನು ಸ್ವಾಗತಿಸಿ ನಮ್ಮಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಚಿನ್ನಾಭರಣಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡಲಾಗುವುದು ಎಂದು ತಿಳಿಸಿ ಗ್ರಾಹಕರ ಸಹಕಾರ ಕೋರಿದರು. ಸಿದ್ಧಾರ್ಥ ಶೆಣೈ ವಂದಿಸಿದರು.