- ಜೀವನದ ಗುರಿ ಸಾಧನೆಗೆ ಟ್ರ್ಯಾಕ್ ತಪ್ಪಿಸದೇ ಮುನ್ನಡೆಯಿರಿ: ಜನಾರ್ದನ ಟಿ
ನೆಲ್ಯಾಡಿ: ವಿಶಾಲವಾದ ಕ್ರೀಡಾಂಗಣದಲ್ಲಿ ಓಡಲು ಟ್ರ್ಯಾಕ್ ಇದೆ. ನಾವು ಟ್ರ್ಯಾಕ್ ತಪ್ಪಿಸಿ ಓಡಿದರೆ ಫಲಿತಾಂಶ ಬರುವುದಿಲ್ಲ. ಅದೇ ರೀತಿ ಪ್ರತಿಯೊಬ್ಬರ ಜೀವನಕ್ಕೂ ಒಂದು ಗುರಿ ಇರಲಿ. ಆ ಗುರಿಯನ್ನು ತಲುಪಲು ಟ್ರ್ಯಾಕ್ ಇರಲಿ. ಸತತ ಪ್ರಯತ್ನದಿಂದ ಟ್ರ್ಯಾಕ್ ತಪ್ಪಿಸದೇ ಓಡಲು ಕಲಿತರೆ ನಮಗೆ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದು ನೆಲ್ಯಾಡಿ ಸರಕಾರಿ ಉನ್ನತ್ತೀಕರಿಸಿದ ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ಹೇಳಿದರು.
ಅವರು ನೆಲ್ಯಾಡಿ ಬೆಥನಿ ಐಟಿಐನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ, ಸಂಚಾಲಕರೂ ಆದ ರೆ| ಫಾ| ಸತ್ಯನ್ ತೋಮಸ್ ಒ.ಐ.ಸಿ.ಯವರು ಅಧ್ಯಕ್ಷತೆ ವಹಿಸಿದ್ದರು. ಜ್ಞಾನೋದಯ ಬೆಥನಿ ಪಿ.ಯು.ಕಾಲೇಜು ಪ್ರಾಂಶುಪಾಲ ರೆ|ಫಾ| ತೋಮಸ್ ಬಿಜಿಲಿ, ನೆಲ್ಯಾಡಿ ಎಸ್.ಬಿ. ಕಾಲೇಜಿನ ಪ್ರಾಂಶುಪಾಲ ರೆ|ಫಾ| ಮೆಲ್ವಿನ್ ಮ್ಯಾಥು, ಬೆಥನಿ ಐ.ಟಿ.ಐ ಪ್ರಾಂಶುಪಾಲ ಸಜಿ ಕೆ ತೋಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಸಜಿ ಕೆ ತೋಮಸ್ರವರು ಕ್ರೀಡಾಪಟುಗಳಿಗೆ ಪ್ರಮಾಣವಚನ ಬೋಧಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಹರಿಪ್ರಸಾದ್ ರೈ ಸ್ವಾಗತಿಸಿ, ಶಿವಾನಂದ ಎಸ್ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಹಾಗೂ ಶೈಲಾ ಕೆ.ಎ., ಕ್ರೀಡಾ ಕಾರ್ಯಕ್ರಮ ನಿರೂಪಿಸಿದರು. ಜ್ಞಾನೋದಯ ಬೆಥನಿ ಅಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುದರ್ಶನ್, ದೈಹಿಕ ಶಿಕ್ಷಣ ಶಿಕ್ಷಕಿ ಆಶಾ, ಕ್ರೀಡಾ ಉಸ್ತುವಾರಿ, ಕಿರಿಯ ತರಬೇತಿ ಅಧಿಕಾರಿಯೂ ಆದ ವಿನ್ಸೆಂಟ್ ಸಿ.ಎಸ್, ಶಿವಾನಂದ ಎಸ್., ಮತ್ತು ಐಟಿಐ ಅಧ್ಯಾಪಕರು ಕ್ರೀಡಾ ಕಾರ್ಯಕ್ರಮಗಳಿಗೆ ಸಹಕರಿಸಿದರು. ವಿದ್ಯಾರ್ಥಿನಿಯರಾದ ಲಿಖಿತ ಮತ್ತು ಬಳಗದವರು ಪ್ರಾರ್ಥಿಸಿದರು.