ಭಾರಿ ಗಾಳಿಮಳೆಗೆ ದೇವಳದ ಗದ್ದೆಯ ಸಾಂಸ್ಕೃತಿಕ ಕಾರ್ಯಕ್ರಮ ತಾತ್ಕಾಲಿಕ ಸ್ಥಗಿತ – ಗಾಳಿಗೂ ಆರದ ದೀಪ

0

 

ಪುತ್ತೂರು: ಎ.13 ರ ಭಾರಿ ಗಾಳಿ ಮಳೆಯಿಂದಾಗಿ ಪುತ್ತೂರು ಜಾತ್ರೆಗೆ ದೇವಳದ ಗದ್ದೆಯ ಎದುರು ಭಾಗದ ಶ್ರೀ ಶಿವಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುನ್ನೆಚ್ಚರಿಕೆಯಿಂದ ತಾತ್ಕಾಲಿಕವಾಗಿ ರದ್ದು ಪಡಿಸಲಾಯಿತು. ಗುಡುಗಿನ ಆರ್ಭಟ ಮತ್ತು ಗಾಳಿಗೆ ವೇದಿಕೆ ಸುತ್ತಮುತ್ತ ಮಳೆ ನೀರು ಸೋರುತ್ತಿದ್ದು ತಕ್ಷಣ ಗ್ರೀನ್ ರೂಮ್ ನಲ್ಲಿದ್ದ ಕಲಾವಿದರನ್ನು ಸಭಾಂಗಣಕ್ಕೆ ಕಳುಹಿಸಿಕೊಡುವ ಕೆಲಸವನ್ನು ಸಾಂಸ್ಕೃತಿಕ ಕಾರ್ಯಕ್ರಮದ ಉಪಸಮಿತಿಯವರು ಮಾಡಿದರು. ಪ್ರೇಕ್ಷರು ಮತ್ತು ಕಲಾವಿದರು ಗಾಳಿ ಮಳೆಗೆ ವೇದಿಕೆಯ ಸಭಾಂಗಣದಲ್ಲಿ ಆಶ್ರಯಪಡೆದರು.

ಗಾಳಿ ಮಳೆ ಬಂದರೂ ಆರದ ದೀಪ
ಪುತ್ತೂರು: ಪುತ್ತೂರು ಜಾತ್ರೆಯ ದೇವಳದ ಎದುರು ಗದ್ದೆಯ ಶ್ರೀ ಪಾರ್ವತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇಳೆ ಭಾರಿ ಗಾಳಿ ಬಂದು ಕಾರ್ಯಕ್ರಮ ಅರ್ಧದಲ್ಲೇ ನಿಂತರೂ ವೇದಿಕೆಯಲ್ಲಿ ಬೆಳಗಿಸಿದ ದೀಪ ಮಾತ್ರ ಊರ್ದ್ವ ಮುಖವಾಗಿ ನಿರಂತರವಾಗಿ ಬೆಳಗಿದೆ.

LEAVE A REPLY

Please enter your comment!
Please enter your name here