ಈಶ್ವರಮಂಗಲದ ಅವಿವಾಹಿತ ಯುವಕ ಉಮ್ಮರ್ ಸಿ.ಎಚ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಈಶ್ವರಮಂಗಲದ ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಎ.18ರಂದು ನಡೆದಿದೆ. ಈಶ್ವರಮಂಗಲ ಸಮೀಪದ ಮುಗುಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಉಮ್ಮರ್ ಸಿ.ಎಚ್(28.ವ) ಮೃತಪಟ್ಟವರು.

ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಉಮ್ಮರ್ ಸಿ.ಎಚ್ ಅವರು ಇತ್ತೀಚೆಗೆ ತನ್ನ ಅಣ್ಣನ ಜೊತೆ ಬೆಂಗಳೂರಿಗೆ ತೆರಳಿದ್ದರು. ಎ.17ರಂದು ರಾತ್ರಿ ಬೆಂಗಳೂರಿನಿಂದ ಊರಿಗೆ ಬಸ್‌ನಲ್ಲಿ ಹೊರಟಿದ್ದ ಉಮ್ಮರ್ ಸಿ.ಎಚ್ ಅವರು ಬೆಳಿಗ್ಗೆ ಪುತ್ತೂರು ತಲುಪಿದ್ದರು. ಈ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

ಮೃತರು ತಂದೆ, ತಾಯಿ ಝೈನಬಾ, ಸಹೋದರರಾದ ಹಮೀದ್ ಸಿ.ಎಚ್, ಯೂಸುಫ್ ಸಿ.ಎಚ್, ಅಝೀಝ್ ಸಿ.ಎಚ್, ಉಸ್ಮಾನ್ ಸಿ.ಎಚ್ ಹಾಗೂ ಅಲಿ ಸಿ.ಎಚ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here