ಪುತ್ತೂರು : ಒಕ್ಕಲಿಗ ಸ್ವಸಹಾಯ ಸಂಘದ ಉಪ್ಪಿನಂಗಡಿ ವಲಯದ ಬಜತ್ತೂರು ಒಕ್ಕೂಟದ ಶ್ರೀದೇವಿ ಸ್ವಸಹಾಯ ತಂಡದ ಸದಸ್ಯೆ ಜಲಜಾಕ್ಷಿರವರ ಪುತ್ರ ಸುರೇಶ್ರವರು ನಿಧನ ಹೊಂದಿದ್ದು ಇವರ ಕುಟುಂಬದ ಸದಸ್ಯರಿಗೆ ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ಧನಸಹಾಯದ ಚೆಕ್ ವಿತರಣೆ ಮಾಡಲಾಯಿತು. ಒಕ್ಕಲಿಗ ಸ್ವ ಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ. ನಾರಾಯಣ, ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ, ವಲಯದ ಮೇಲ್ವಿಚಾರಕರಾದ ಸುಮಲತ, ಹಾಗೂ ಉಪ್ಪಿನಂಗಡಿ ಕೃಷಿ ಅಧಿಕಾರಿ ಬರ್ಮನ್ರವರು ಉಪಸ್ಥಿತರಿದ್ದರು.