- 127 ಕೋಟಿ ರೂ.,ವ್ಯವಹಾರ
- ಶೇ.98.78 ಸಾಲ ವಸೂಲಾತಿ
- 65.15 ಕೋಟಿ ರೂ.ಠೇವಣಿ ಸಂಗ್ರಹ
- 26.92 ಕೋಟಿ ರೂ. ಸಾಲ ವಿತರಣೆ
ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2021-22ನೇ ಸಹಕಾರಿ ವರ್ಷದಲ್ಲಿ 127 ಕೋಟಿ ರೂ.,ವ್ಯವಹಾರ ನಡೆಸಿ ಅಂದಾಜು 62.27 ಲಕ್ಷ ರೂ., ನಿವ್ವಳ ಲಾಭ ಗಳಿಸಿದೆ. ಶೇ.98.78ರಷ್ಟು ಸಾಲ ವಸೂಲಾತಿಯೂ ಮಾಡಿದೆ ಎಂದು ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ತಿಳಿಸಿದ್ದಾರೆ.
ಸಂಘವು ಆಲಂಕಾರಿನಲ್ಲಿ ಬೈದಶ್ರೀ ಸಹಕಾರ ಸೌಧದಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ, ಕೊಯಿಲದಲ್ಲಿ ಶಾಖೆಯನ್ನು ಹೊಂದಿದೆ. ಸಂಘವು ವರದಿ ವರ್ಷದಲ್ಲಿ 65.15 ಕೋಟಿ ರೂ.ಠೇವಣಿ ಸಂಗ್ರಹಿಸಿದೆ. 26.92 ಕೋಟಿ ರೂ., ವಿವಿಧ ಸಾಲ ವಿತರಣೆ ಮಾಡಿದೆ. ಸಂಘದ ಸಾಧನೆಗೆ ಶ್ರಮಿಸಿದ ಆಡಳಿತ ಮಂಡಳಿ, ಶಾಖಾ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿವರ್ಗ, ಪಿಗ್ಮಿ ಸಂಗಗ್ರಾಹಕರು, ಸದಸ್ಯರು, ಗ್ರಾಹಕರಿಗೆ, ಠೇವಣಿದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಸಂಘದ ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ಕುಮಾರ್, ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.