ಪುತ್ತೂರು: ಶ್ರೀಶಾರದಾಂಬ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿಜಯಕುಮಾರ್ ಕೈಪಂಗಳ ಹಾಗೂ ಉಪಾಧ್ಯಕ್ಷರಾಗಿ ಶಿವಣ್ಣ ನಾಯ್ಕ ಆಯ್ಕೆಯಾಗಿದ್ದಾರೆ. ಇಲ್ಲಿನ ರಾಮನಾಥ ಚೇಂಬರ್ನಲ್ಲಿರುವ ಸಂಘದ ಕಛೇರಿಯಲ್ಲಿ ಎ.೨೭ರಂದು ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ, ತೆರಿಗೆ ಸಲಹೆಗಾರ ವಿಜಯ ಕುಮಾರ್ ಕೈಪಂಗಳರವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ರಿಜಿಸ್ಟ್ರಾರರ್ ಮೋಹನ ನಾಕ್ ಬೆದ್ರಾಳ ಹಾಗೂ ಮಂಗಳೂರು ಮನಪಾ ನಿವೃತ್ತ ಅಧಿಕಾರಿ ಶಿವಣ್ಣ ನಾಯ್ಕರವರು ಸ್ಪರ್ಧಿಸಿದ್ದು ಶಿವಣ್ಣ ನಾಯ್ಕರವರು ಗೆಲುವು ಪಡೆದಿದ್ದಾರೆ. ಸಂಘದ ನೂತನ ಆಡಳಿತ ಮಂಡಳಿಗೆ ೧೪ ಮಂದಿ ನಿರ್ದೇಶಕರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಶೋಭಾ ಎನ್.ಎಸ್. ಆಯ್ಕೆ ಪ್ರಕ್ರಿಯೆ ನಡೆಸಿ ಚುನಾಯಿತ ನಿರ್ದೇಶಕರುಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಸ್ಥಾಪಕರಾದ ರವೀಂದ್ರನಾಥ್ ನಾಯ್ಕ್ ಪಡೀಲು, ನಿರ್ದೇಶಕರಾದ ಗಂಗಾಧರ ನಾಯ್ಕ್ ನೀರುಮಾರ್ಗ ಮಂಗಳೂರು, ಟಿ.ಬಾಲಕೃಷ್ಣ ಕೊಂಚಾಡಿ ಮಂಗಳೂರು, ಕೇಶವ ಎಂ.ಎಸ್., ಕೇಶವ ನಾಯ್ಕ್ ಪುತ್ತೂರು, ಗೋಪಾಲಕೃಷ್ಣ ಪಡೀಲು ಮಂಗಳೂರು, ತ್ಯಾಂಪ ನಾಯ್ಕ್ ಕಜೆ, ದಿನೇಶ್ ನಾಯ್ಕ್ ಕುಡ್ತಮುಗೇರು, ಎಸ್.ಮೋಹನ್ ನಾಯ್ಕ್ ಬೆದ್ರಾಳ, ಶಾರದಾಕೇಶವ ಸೂತ್ರಬೆಟ್ಟು, ಅರ್ಪಣ ಪಡೀಲು ಬನ್ನೂರು, ಶೋಭ ಪಡೀಲು ಉಪಸ್ಥಿತರಿದ್ದರು.