ಪುತ್ತೂರು: ಚಾರ್ವಕ ಗ್ರಾಮದ ಜತೋಡಿ ಜತಪ್ಪ ಗೌಡ ರವರ ಮನೆಯಲ್ಲಿ ಶ್ರೀ ಚಾಮುಂಡಿ ಒಕ್ಕಲಿಗ ಸ್ವಸಹಾಯ ಸಂಘ ರಚಿಸಲಾಯಿತು. ಜತೋಡಿ ಜತಪ್ಪ ಗೌಡ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮೇಲ್ವಿಚಾರಕರಾದ ವಿಜಯ್ ಕುಮಾರ್ ರವರು ಮಾಹಿತಿ ನೀಡಿದರು. ಗೌಡ ಸಂಘದ ಹಿರಿಯರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕರವರು ಸಭಾ ನಡವಳಿಯನ್ನು ಹಸ್ತಾಂತರಿಸಿ ಶುಭಹಾರೈಸಿದರು. ಸಂಘದ ಪ್ರಬಂಧಕರಾಗಿ ಜತಪ್ಪ ಗೌಡ, ಸಂಯೋಜಕರಾಗಿ ನಿಶ್ಚಿತ ಆಯ್ಕೆಯಾದರು. ಪ್ರಕಾಶ್, ಮನೋಜ್, ಯತಿರಾಜ್, ನಯನ್ ಕುಮಾರ್ ಕೆ, ತಿಲಕ್, ನಾಯನ್ ಜೆ ಮತ್ತು ಪುಷ್ಪರಾಜ್ ಸಂಘದ ಇತರ ಸದಸ್ಯರು. ಪ್ರೇರಕರಾದ ಉದಯರವರು ಸ್ವಾಗತಿಸಿ, ವಂದಿಸಿದರು.