ಪಾಣಾಜೆ: ಸನ್ಮಿತ್ರ ರಿಕ್ಷಾ ಮಾಲಕ ಚಾಲಕ ಸಂಘದ ನೇತೃತ್ವದಲ್ಲಿ ಕೋಟೆ ರಣಮಂಗಲ ರಸ್ತೆ ದುರಸ್ತಿ

0


ನಿಡ್ಪಳ್ಳಿ: ಹೊಂಡ ಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೀರಾ ಕಷ್ಟಕರವಾಗಿದ್ದ ಪಾಣಾಜೆ ಗ್ರಾಮದ ಕೋಟೆ ರಣಮಂಗಲ ರಸ್ತೆಯನ್ನು ಸನ್ಮಿತ್ರ ರಿಕ್ಷಾ ಚಾಲಕ ಮಾಲಕರ ಸಂಘ ಆರ್ಲಪದವು ಇವರ ನೇತೃತ್ವದಲ್ಲಿ  ಮೆ.31 ರಂದು ದುರಸ್ತಿಗೊಳಿಸಲಾಯಿತು.

ಗುತ್ತಿಗೆದಾರರಾದ ಸದಾಶಿವ ರೈ ಸೂರಂಬೈಲು ಕೊಡುಗೆಯಾಗಿ ನೀಡಿದ ಮರಳು, ಜಲ್ಲಿ, ಸಿಮೆಂಟು ಬಳಸಿ ಗುಂಡಿಗಳನ್ನು ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಯಿತು. ಸಮ್ಮಿತ್ರ ರಿಕ್ಷಾ ಮಾಲಕ ಚಾಲಕ ಸಂಘದ ಅಧ್ಯಕ್ಷ ಜಾಣು ನಾಯ್ಕ ಭರಣ್ಯ, ಪ್ರಧಾನ ಕಾರ್ಯದರ್ಶಿ ಫಾರೂಕ್, ಜತೆ ಕಾರ್ಯದರ್ಶಿ ಶಶಿಧರ ನಡುಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ರೈ ಕೋಟೆ, ಹರಿಪ್ರಸಾದ್ ಮಣಿಯಾಣಿ, ಮಧುಸೂದನ್, ನವೀನ್ ಕುಮಾರ್, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ಮೋಹನ ನಾಯ್ಕ ಸೂರಂಬೈಲ್ ಹಾಗೂ ಊರವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here