ಪುತ್ತೂರು: ಕಾರ್ಮಿಕ ಇಲಾಖೆ ಹಾಗೂ ಸಿ.ಎಸ್.ಸಿ, ದ.ಕ ಜಿಲ್ಲಾ ಇ-ಗವರ್ನೆನ್ಸಿ ಇಂಡಿಯಾದ ವತಿಯುಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಅಕಮ್ ಅಂತ್ಯೋದಯ ಕ್ಯಾಂಪೈನ್ ಪ್ರಧಾನ ಮಂತ್ರಿ ಮಾನ್ ಧನ್ ಪಿಂಚನಿ ಯೋಜನೆ, ಒ-ಶ್ರಮ್ ಯೋಜನೆಯ ಮಾಹಿತಿ ಹಾಗೂ ಉಚಿತ ನೋಂದಾವಣೆಯು ಜೂ.13ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.
ಕಾರ್ಮಿಕ ಇಲಾಖೆ ಪುತ್ತೂರು ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ, ಜಿಲ್ಲಾ ಸಿ.ಎಸ್.ಸಿ ದ.ಕ ಜಿಲ್ಲಾ ವ್ಯವಸ್ಥಾಪಕ ನಿಧಿನ್ ರಾಜ್ ಇಲಾಖೆಯ ವಿವಿಧ ಯೋಜನೆಗಳು, ಅವುಗಳ ಪ್ರಯೋಜನ ಹಾಗೂ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಇರುವ ಮಾನದಂಡಗಳ ಕುರಿತು ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆ ಕಚೇರಿ ಸಿಬಂದಿಗಳಾದ ಭಾಗ್ಯಶ್ರೀ, ಹರೀಶ್ ಉಪಸ್ಥಿತರಿದ್ದರು.