ಪುತ್ತೂರು: `ಅಂಬರ ಮರ್ಲೆರ್’ ಖ್ಯಾತಿಯ ಬಳಿಕ ಇದೀಗ ಸುದ್ದಿ ಮೀಡಿಯಾ ನಿರ್ಮಾಣದಲ್ಲಿ ರಂಗಭೂಮಿ ಕಲಾವಿದ, ನಿರ್ದೇಶಕ ಸುಂದರ್ ರೈ ಮಂದಾರ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ `ಪೂರಿ ಬಾಜಿ’ ಹಾಸ್ಯ ಧಾರಾವಾಹಿಗೆ ಜೂ.೨೬ರಂದು ಕುಂಬ್ರ ಪೇಟೆಯ ಸುತ್ತಮುತ್ತ ಮೂರನೇ ದಿನದ ಚಿತ್ರೀಕರಣ ನಡೆಯಿತು.
ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಸುಧಾಕರ್ ಪಡೀಲ್, ಸಮದ್ ಕುರಿಯ, ಬಾಬು ಪೂಜಾರಿ ಬಡಕ್ಕೋಡಿ, ಕರ್ಣ ರೈ ಬಿಜಾಲ್ ಮತ್ತು ಫಾಮಿಲಿ, ಮೋಹಿನಿ ಯಾದವ್ ಈಶ್ವರಮಂಗಲ, ಅಶೋಕ್ ಬನ್ನೂರು, ಪ್ರಸಾದ್ ಕೊಲ, ಜೂ. ಬೋಳಾರ್ ಕಾಂಚನ ಶಾಂತಿನಗರ, ವಿನಯ ಕುಮಾರ್ ಬಂಡಾಡಿ, ದಿನೇಶ್ ಆಲಂಗಾರು, ಜಗದೀಶ್ ರೈ ಅಲಂಗೂರು, ಸಂಶುದ್ದೀನ್ ಟಿಂಬರ್ ಮರ್ಚಂಟ್ ಕುಂಬ್ರ, ಮಲ್ಲಿಕಾ ರೈ ಮಂದಾರ, ಅಭೀಷ್ ರೈ, ಎಂ. ಪವರ್ ಕುಂಬ್ರ ಭಾಗವಹಿಸಿದರು.