ಪುತ್ತೂರು: ದಕಜಿಪಉ ಸರಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಜೂ. 28 ರಂದು ಶ್ರಮದಾನ ನಡೆಯಿತು. ಶಾಲಾ ಆವರಣದ ಸ್ವಚ್ಚತೆ ಮತ್ತು ಶಾಲಾ ಮೈದಾನದಲ್ಲಿ ಕೆಸರುತುಂಬಿಕೊಂಡಿದ್ದು ಅದನ್ನು ಶುಚಿ ಮಾಡುವ ಕಾರ್ಯ ನಡೆಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಬಾಬು ಮರಿಕೆ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಚೆನ್ನಪ್ಪ ಮರಿಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ ಪಾಪೆತ್ತಡ್ಕ, ಗಣೇಶ್ ಮರಿಕೆ, ಸುಬ್ರಹ್ಮಣ್ಯ ನಾಯಕ್ ಮರಿಕೆ, ಅಶ್ರಫ್ ಸಂಟ್ಯಾರ್ ಉಪಸ್ಥಿತರಿದ್ದರು.