ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ಸುರಭಿ’ ಹಿಂದಿ ಭಾಷಾ ಸಂಘದ ವತಿಯಿಂದ ರಾಷ್ಟ್ರಭಾಷಾ ಪರೀಕ್ಷಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿಪೂರ್ವಕಾಲೇಜಿನ ಪ್ರಾಧ್ಯಾಪಕಿ ಪ್ರಫುಲ್ಲಾರವರು ಹಿಂದಿ ಪ್ರಚಾರ ಸಭಾ ವತಿಯಿಂದ ನಡೆಸಲ್ಪಡುವ ವಿವಿಧ ಪದವಿ ಕೋರ್ಸುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಪರೀಕ್ಷಾ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಹಿಂದಿ ಭಾಷಾ ಸಂಘದ ಸಂಯೋಜಕಿ ದಾಕ್ಷಾಯಿಣಿ ಕಾರ್ಯಕ್ರಮ ಸಂಘಟಿಸಿದರು.