ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರಕಾರವು ಏಕ ಬಳಕೆಯ ಪ್ಲಾಸ್ಟಿಕ್ಗಳನ್ನು ನಿಷೇಧಿಸಿ ಕಾನೂನು ಹೊರಡಿಸಿದೆ. ಮನುಷ್ಯನ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಅನ್ನು ಬ್ಯಾನ್ಗೊಳಿಸಿದೆ ಕೇಂದ್ರ ಹಾಗೂ ರಾಜ್ಯ ಸರಕಾರ. ಪ್ಲಾಸ್ಟಿಕ್ ಬ್ಯಾಗ್ ಇಲ್ಲದಿದ್ದರೇನಂತೆ?, ಸಾಮಾನು ಸರಂಜಾಮುಗಳನ್ನು ಹೊತ್ತೊಯ್ಯಲು ಇಲ್ಲೊಂದು ಸಂಸ್ಥೆಯು ಪರಿಸರಸ್ನೇಹಿ ಕೈಚೀಲ ಹಾಗೂ ಕಾಟನ್ ಕೈಚೀಲವನ್ನು ಸಮಾಜಕ್ಕೆ ಪರಿಚಯಿಸುತ್ತಿದೆ.
ಹೌದು, ಇಲ್ಲಿನ ಮುಖ್ಯರಸ್ತೆಯಲ್ಲಿನ ಧರ್ಮಸ್ಥಳ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಕೋಲಾಡಿ ಇಂಡಸ್ಟ್ರೀಸ್ನಲ್ಲಿ ಪರಿಸರ ಸ್ನೇಹಿ ಕೈಚೀಲ ಹಾಗೂ ಕಾಟನ್ ಕೈಚೀಲಗಳು ಲಭ್ಯವಿದೆ. ಕೇಂದ್ರ ಸರಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾನ್ಯತೆಯನ್ನೂ ಈ ಸಂಸ್ಥೆಯು ಪಡೆದಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಸೈಜ್ ಹಾಗೂ ವಿನ್ಯಾಸಗಳಲ್ಲಿ ಕೈಚೀಲ ಹಾಗೂ ಕಾಟನ್ ಕೈಚೀಲಗಳು ಮಿತದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕೋಲಾಡಿ ಇಂಡಸ್ಟ್ರೀಸ್ ಮೊ:9844553654 ನಂಬರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.