ಅಶ್ವಿನಿ ಬಾರ್&ರೆಸ್ಟೋರೆಂಟ್‌ನಲ್ಲಿ ಹವಾನಿಯಂತ್ರಿತ ಕೊಠಡಿ ಉದ್ಘಾಟನೆ

0

ಪುತ್ತೂರು: ೨೦೦೩ರಲ್ಲಿ ದರ್ಬೆ-ಬೈಪಾಸ್‌ನಲ್ಲಿ ಸ್ಥಾಪನೆಯಾದ ಅಶ್ವಿನಿ ಬಾರ್ ಮತ್ತು ರೆಸ್ಟೋರೆಂಟ್ ಇದೀಗ ಗ್ರಾಹಕರಿಗೆ ಸಿಹಿ ಸುದ್ದಿ ನೀಡುವತ್ತ ಹೆಜ್ಜೆಯನ್ನಿಟ್ಟಿದೆ. ಕುಟುಂಬ ಸಮೇತ ಆಗಮಿಸುವ ಗ್ರಾಹಕರಿಗೆ ಶುಚಿ-ರುಚಿಯಾದ ಖಾದ್ಯದೊಂದಿಗೆ ಇದೀಗ ಸಕಲ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತವಾದ ಹವಾನಿಯಂತ್ರಿತ ಕೊಠಡಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

ಹೊಟೇಲು ಮಾಲಕರಾದ ದೇರ್ಲ ಕರುಣಾಕರ ರೈ ದಂಪತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಶುಚಿ-ರುಚಿ ಖಾದ್ಯಗಳಿಗೆ ಪ್ರಸಿದ್ಧಿ ಪಡೆದಿರುವ ಅಶ್ವಿನಿ ಹೊಟೇಲ್ ಮಾಲಕರಾದ ಉದ್ಯಮಿ ಕರುಣಾಕರ ರೈಯವರು ಗ್ರಾಹಕರನ್ನು ಸೆಳೆಯಲು ಸುಸಜ್ಜಿತವಾದ ಹವಾನಿಯಂತ್ರಿತ ಕೊಠಡಿಯನ್ನು ನಿರ್ಮಿಸಿದ್ದಾರೆ. ಕುಟುಂಬಸಮೇತ ಆಗಮಿಸುವ ಗ್ರಾಹಕರಿಗೆ ಇಲ್ಲಿನ ಸಕಲ ವ್ಯವಸ್ಥೆಗಳು ಪೂರಕವಾಗಿ ಪರಿಣಮಿಸುವಂತಾಗಿದೆ. ದೀನದಲಿತರ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವ ಕರುಣಾಕರ್ ರೈಯವರು ಹೊಟೇಲು ಮುಂಭಾಗದಲ್ಲಿ ಉತ್ತಮ ಮಳಿಗೆಯೊಂದನ್ನು ನಿರ್ಮಿಸಿದ್ದಾರೆ. ಬಂಟ ಸಮುದಾಯದಲ್ಲಿ ಸದಾ ಗುರುತಿಸಿಕೊಂಡಿರುವ ಕರುಣಾಕರ್ ರೈಯವರು ಸಂಘದಿಂದ ಶಿಕ್ಷಕರಿಗೆ ಕೊಡುವ ಪ್ರಶಸ್ತಿಗೆ ರೂ.೨ ಲಕ್ಷ ಡೆಪಾಸಿಟ್ ಇಟ್ಟು ನೆರವನ್ನು ನೀಡಿರುವುದು ಅಭಿನಂದನೀಯ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಎಲ್ಲರಿಗೂ ಒಳ್ಳೆಯ ಸೇವೆ ಸಿಗುವಂತಾಗಲು ಪ್ರಸ್ತುತ ಸುಸಜ್ಜಿತ ರೀತಿಯಲ್ಲಿ ಹವಾನಿಯಂತ್ರಿತ ಕೊಠಡಿಯನ್ನು ಅಶ್ವಿನಿ ಹೊಟೇಲ್ ಸಂಸ್ಥೆಯುಪರಿಚಯಿಸುತ್ತಿದೆ. ಗ್ರಾಹಕರು ಹೊಟೇಲ್‌ಗೆ ಉತ್ತಮ ರೀತಿಯಲ್ಲಿ ವ್ಯಾಪಾರ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ. ಸಂಸ್ಥೆಯು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುತ್ತಾ ಮುಂದುವರೆದಿದ್ದು ಮುಂದಿನ ದಿನಗಳಲ್ಲಿ ಹೋಟೆಲ್ ಇನ್ನಷ್ಟು ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಅಶ್ವಿನಿ ಹೊಟೃಲ್‌ನ ಪಾಲುದಾರ ಅಶ್ವಿನ್ ರೈ, ಉದ್ಯಮಿ ಜಯಕುಮಾರ್ ರೈ ಎಂ.ಆರ್, ಆರ್ಕಿಟೆಕ್ಟ್ ಶ್ರವಣ್ ರೈ, ದೇರ್ಲ ಕರುಣಾಕರ್ ರೈ ಕುಟುಂಬಸ್ಥರು, ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಜೀವನ್ ರೈ ಸಹಕರಿಸಿದರು.

ಗ್ರಾಹಕರ ಪ್ರೋತ್ಸಾಹ ಸದಾ ಇರಲಿ…
ಅಶ್ವಿನಿ ಹೊಟೇಲ್ ತೆರೆದು ಪ್ರಸ್ತುತ ೧೯ ವರ್ಷ ತುಂಬಿದೆ. ಈ ಅವಧಿಯಲ್ಲಿ ನಾವು ಯಾವತ್ತೂ ಹಿಂದಕ್ಕೆ ಹೋಗಲಿಲ್ಲ, ಮುಂದಕ್ಕೆ ಹೋಗುತ್ತಿದ್ದೇವೆ. ನಮ್ಮ ಗ್ರಾಹಕರಿಗೆ ತೃಪ್ತಿಯಾಗುವ ರೀತಿಯಲ್ಲಿ ನಾವು ನಿರಂತರ ಸೇವೆಯನ್ನು ನೀಡುತ್ತಾ ಬಂದಿರುವ ಆತ್ಮವಿಶ್ವಾಸ ನಮ್ಮದಾಗಿದೆ. ಯಾರೂ ಕೂಡ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಹೇಳಿದವರಿಲ್ಲ. ಹೊಟೇಲ್ ಹಳೆಯದಾಗಲು ಬಿಡದೆ ಪ್ರತಿ ವರ್ಷ ನವೀಕರಣ ಮಾಡುತ್ತಲೇ ಬಂದಿದ್ದೇವೆ. ಗ್ರಾಹಕರ ಬೇಡಿಕೆಯಂತೆ ಪ್ರಸ್ತುತ ಹವಾನಿಯಂತ್ರಿ ಕೊಠಡಿಯ ಉದ್ಘಾಟನೆಯೂ ಈಗ ನೆರವೇರಿದೆ. ನಮಗೆ ಒಳ್ಳೆಯ ಗ್ರಾಹಕರು ಇದ್ದಾರೆ, ಫ್ಯಾಮಿಲಿ ಗ್ರಾಹಕರು ಇದ್ದಾರೆ. ಎಲ್ಲರ ಪ್ರೋತ್ಸಾಹ ಸದಾ ಇರಲಿ ದೇರ್ಲ ಕರುಣಾಕರ್ ರೈ, ಮಾಲಕರು, ಹೊಟೇಲ್ ಅಶ್ವಿನಿ

LEAVE A REPLY

Please enter your comment!
Please enter your name here