ಪಾಂಗಲಾಯಿ ದೈವಸ್ಥಾನದ ಸಭಾಂಗಣದಲ್ಲಿ ಉಚಿತ ಯೋಗ ಶಿಕ್ಷಣಕ್ಕೆ ಚಾಲನೆ

0

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 5ನೇ ಶಾಖೆ ಪಾಂಗಲಾಯಿ ಶ್ರೀ ಅರಸು ಮುಂಡ್ಯತಾಯ ದೈವಸ್ಥಾನದ ಸಭಾಂಗಣದಲ್ಲಿ ಆರಂಭಗೊಂಡಿದ್ದು ಯೋಗ ಶಿಕ್ಷಣ ಉಚಿತವಾಗಿರುತ್ತದೆ.

ಮುಂಡ್ಯತಾಯ ದೈವಸ್ಥಾನ ಸಮಿತಿ ಅಧ್ಯಕ್ಷ ತಾರಾನಾಥ್ ರೈ ಅವರು ಯೋಗ ಶಿಬಿರ ಉದ್ಘಾಟಿಸಿದರು. ಈ ಶಾಖೆಯು ಸಂಪೂರ್ಣವಾಗಿ ಉಚಿತವಾಗಿದ್ದು, 48 ದಿನಗಳ ಕಾಲ ನಡೆಯುವ ಈ ಯೋಗದ ಸದುಪಯೋಗವನ್ನು ಈ ಭಾಗದ ನಿವಾಸಿಗಳು ಪಡೆದುಕೊಳ್ಳುವಂತೆ ಅವರು ವಿನಂತಿಸಿದರು. ಯೋಗ ಶಿಕ್ಷಣದ ಜಿಲ್ಲಾ ಸಂಚಾಲಕ ಜಯರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಿಸ್ತರಣಾ ಪ್ರಮುಖ ಪ್ರತಾಪ್, ಆಶಾಲತಾ , ನಳಿನಿ , ಉಷಾ , ಉಷಾಮಣಿ , ಶುಭ, ರಶ್ಮಿ, ಚಂದ್ರಕಾಂತ ವಿವಿಧ ರೀತಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here