ರೋಟರಿ ಸ್ವರ್ಣದಿಂದ ಮೂಲಿಕಾ ವೈದ್ಯ ಕಳುವಾಜೆ ಜಿನ್ನಪ್ಪ ಗೌಡರಿಗೆ ಸನ್ಮಾನ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಅ.9 ರಂದು ಕಾಮಣ ಗ್ರಾಮದ ಕಳುವಾಜೆ ಎಂಬಲ್ಲಿ ರೋಟರಿ ಸ್ವರ್ಣದ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆರವರ ನೇತೃತ್ವದಲ್ಲಿ ಕಡಬ ತಾಲೂಕು ಕಾಮಣ ಗ್ರಾಮದ ಮೂಲಿಕಾ ವೈದ್ಯರಾದ ಕಳುವಾಜೆ ಜಿನ್ನಪ್ಪ ಗೌಡರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಸ್ವರ್ಣದ ಮಾಜಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳರವರು ಮಾತನಾಡಿದರು. ಕ್ಲಬ್ ಸದಸ್ಯ ರಾಮಣ್ಣ ರೈ ಸನ್ಮಾನ ಪತ್ರ ವಾಚಿಸಿದರು.  ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಒಡನಾಡಿ ಅರ್.ಎಸ್.ಎಸ್. ಪ್ರಾಂತ ವ್ಯವಸ್ಥಾ ಪ್ರಮುಖ್ ಬಿರ್ಮಣ್ಣ ಗೌಡ ಕರ್ಕುಂಜ ಜಿನ್ನಪ್ಪ ಗೌಡರನ್ನು ಸನ್ಮಾನಿಸಿದರು. ರೋಟರಿ ಸಂಸ್ಥೆಯ ಸದಸ್ಯರುಗಳಾದ ದೀಪಕ್ ಬೊಳ್ವಾರ್, ವಾಸು ಆಚಾರ್ಯ, ಸುಭಾಶ್ ರೈ ಬೆಳ್ಳಿಪ್ಪಾಡಿ, ಮೀನಾಕ್ಷಿ, ಎ.ವಿ. ನಾರಾಯಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪುಷ್ಪಾವತಿ ಕಳುವಾಜೆ ಮತ್ತು ಕಳುವಾಜೆ ಕುಟುಂಬದ ಸದಸ್ಯರು ಭಾಗವಹಿಸಿದರು. ದೇವಿಪ್ರಸಾದ್ ಕಳುವಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಂದರ ಗೌಡ ಕಳುವಾಜೆ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಸ್ವರ್ಣದ ಕಾರ್ಯದರ್ಶಿ ಸುರೇಶ್ ಪಿ ವಂದಿಸಿದರು.

LEAVE A REPLY

Please enter your comment!
Please enter your name here