ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಸಮಾವೇಶದ ಹಿನ್ನೆಲೆ: ಗ್ರಾಮ ಗ್ರಾಮ ಭೇಟಿಗೆ ಚಾಲನೆ

0

ಪುತ್ತೂರು: ಪುತ್ತೂರಿನ‌ ಕಿಲ್ಲೆ ಮೈದಾನದಲ್ಲಿ ಅ.26ರಂದು ನಡೆಯಲಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ದಶಮಾನೋತ್ಸವ, ಟ್ರಸ್ಟ್ ಫಲಾನುಭವಿಗಳ ಸಮಾವೇಶ ಮತ್ತು ದೀಪಾವಳಿ ಹಬ್ಬ ಪ್ರಯುಕ್ತದ ವಸ್ತ್ರ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಆಹ್ವಾನಿಸುವ ಕಾರ್ಯಕ್ರಮಕ್ಕೆ ಅ. 16ರಂದು ಬನ್ನೂರು ಕುಂಟ್ಯಾನ ಶ್ರೀ ದುರ್ಗಾ ಭಜನಾ ಮಂಡಳಿಯಲ್ಲಿ ಚಾಲನೆ ನೀಡಲಾಯಿತು.


ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲನೆ ಮಾಡುವ ಮೂಲಕ ಸಭೆ ಉದ್ಘಾಟಿಸಿದರು. ಟ್ರಸ್ಟ್ ವತಿಯಿಂದ ಮಾಡುತ್ತಿರುವ ಸೇವೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅಶೋಕ್ ರೈ ಕಾರ್ಯಕ್ರಮದ ವಿವರ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಜಯಪ್ರಕಾಶ್ ಬದಿನಾರು, ರಮೇಶ್ ರೈ ನೆಲ್ಲಿಕಟ್ಟೆ, ಡೆನ್ನಿಸ್ ಮಸ್ಕರೇನಸ್, ಚಂದ್ರ‌ ಕುಲಾಲ್, ಹುಕ್ರಪ್ಪ ಕುಲಾಲ್, ಭವ್ಯ, ಪ್ರವೀಣ್ ಕುಮಾರ್ ಚಂದ್ರ ಕುಲಾಲ್, ಗಿರೀಶ್, ಲತಾ, ಉಮೇಶ್, ಸತೀಶ್ ಮಡಿವಾಳ, ಪದ್ಮಾವತಿ, ಚಂದ್ರಶೇಖರ್, ಲೋಹಿತ್ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಕಜೆ ಸ್ವಾಗತಿಸಿ‌, ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

LEAVE A REPLY

Please enter your comment!
Please enter your name here