ಸವಣೂರು-ಮಾಡಾವು-ಸಿದ್ದಮೂಲೆ ರಸ್ತೆಯ ಅಭಿವೃದ್ದಿಗೆ 4.95 ಕೋಟಿ ರೂ. ಅನುದಾನ ಮಂಜೂರು

0

ಸವಣೂರು : ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಸವಣೂರು-ಮಾಡಾವು-ಸಿದ್ದಮೂಲೆ-ಪಾಂಬಾರು ಸಂಪರ್ಕ ರಸ್ತೆಯ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ 4.95 ಕೋಟಿ (4 ಕೋಟಿ 95 ಲಕ್ಷ ) ರೂ. ಅನುದಾನ ಮಂಜೂರುಗೊಂಡಿದೆ.

ಈ ಹಿಂದೆ ಈ ರಸ್ತೆಯ ಅಭಿವೃದ್ದಿಗೆ ರೂ.2 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ರಸ್ತೆಗೆ ಈ ಅನುದಾನ ಸಾಕಾಗದು ಎಂಬ ಹಿನ್ನೆಲೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸಚಿವ ಎಸ್.ಅಂಗಾರ ಅವರು ಲೋಕೊಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲ್‌ ಅವರಿಗೆ ಅನುದಾನ ಹೆಚ್ಚಿಸುವಂತೆ ಪತ್ರ ಬರೆದಿದ್ದರು.

ಇದೀಗ ಈ ರಸ್ತೆಗೆ 4.95 ಕೋಟಿ ರೂ (4 ಕೋಟಿ 95 ಲಕ್ಷ ) ಅನುದಾನ ಮಂಜೂರುಗೊಂಡಿದ್ದು, ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಆರಂಭವಾಗಲಿದೆ.

ಸವಣೂರು-ಮಾಡಾವು-ಸಿದ್ದಮೂಲೆ-ಪಾಂಬಾರು ರಸ್ತೆಯ ಅಭಿವೃದ್ದಿಗಾಗಿ ಹಿಂದಿನಿಂದಲೂ ನಿರಂತರವಾಗಿ ಪ್ರಯತ್ನಿಸಲಾಗುತ್ತಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಗೆ 2 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಬಳಿಕ ಅನುದಾನ ಹೆಚ್ಚಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಸಚಿವ ಎಸ್.ಅಂಗಾರ ಅವರು ಪತ್ರ ಬರೆದಿದ್ದರು. ಇದೀಗ 4.95 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ.

-ರಾಕೇಶ್‌ ರೈ ಕೆಡೆಂಜಿ,

ಪ್ರಧಾನ ಕಾರ್ಯದರ್ಶಿ ಬಿಜೆಪಿ ಸುಳ್ಯ ಮಂಡಲ, ಸದಸ್ಯರು ಅಕ್ರಮ ಸಕ್ರಮ ಸಮಿತಿ ಸುಳ್ಯ ಕ್ಷೇತ್ರ

LEAVE A REPLY

Please enter your comment!
Please enter your name here