ಶಿರಾಡಿ: ಅರಣ್ಯ ಇಲಾಖೆ ನರ್ಸರಿಗೆ ಕಾಡಾನೆ ಲಗ್ಗೆ

0

ನೆಲ್ಯಾಡಿ: ಕೊಂಬಾರು ಗ್ರಾಮದ ಮಂಡೆಕರ ಮುಜೂರು ರಕ್ಷಿತಾರಣ್ಯದಲ್ಲಿ ಕಾಡಾನೆಯೊಂದು ಸೆರೆ ಸಿಕ್ಕಿರುವ ಬೆನ್ನಲ್ಲೇ ಶಿರಾಡಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ನರ್ಸರಿಗೆ ಕಾಡಾನೆಗಳು ಲಗ್ಗೆ ಇಟ್ಟುಹಾನಿಗೊಳಿಸಿರುವ ಘಟನೆ ಫೆ.23ರಂದು ರಾತ್ರಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಿರಾಡಿಯಲ್ಲಿರುವ ಅರಣ್ಯ ಇಲಾಖೆ ನರ್ಸರಿಗೆ ಕಾಡಾನೆ ಲಗ್ಗೆ ಇಟ್ಟಿದ್ದು ನರ್ಸರಿಯಲ್ಲಿನ ಅರಣ್ಯ ಜಾತಿಯ ನರ್ಸರಿ ಗಿಡಗಳಿಗೆ, ನೀರಿನ ಪೈಪ್‌ಗಳಿಗೆ ಹಾನಿಗೊಳಿಸಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here