ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಸಭೆ-ಸನ್ಮಾನ

0

ಪುತ್ತೂರು: ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಶನ್ ವಿಶೇಷ ಸಭೆ ಹಾಗೂ ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಮ್.ಎಚ್. ಮೊಯಿದೀನ್ ಹಾಜಿ ಅಡ್ಡೂರುರವರಿಗೆ ಸನ್ಮಾನ ಸಮಾರಂಭ ಪುತ್ತೂರು ಪಡೀಲ್ ಮೊಯಿನುಲ್ ಇಸ್ಲಾಂ ಜುಮಾ ಮಸೀದಿ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಮದ್ರಸ ಮೇನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆರವರು ಮಾತನಾಡಿ ಕೆಲವು ದಿನಗಳ ಹಿಂದೆ ನಿಧನರಾದ ದ.ಕ.ಜಿಲ್ಲಾ ಮದ್ರಸ ಮೆನೇಜ್‌ಮೆಂಟ್‌ನ ಅಧ್ಯಕ್ಷರಾಗಿದ್ದ ನೌಶಾದ್ ಹಾಜಿ ಸೂರಲ್ಪಾಡಿ ಮತ್ತು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಮೀದ್ ಕಂದಕ್‌ರವರು ಸಲ್ಲಿಸಿದ್ದ ಸೇವೆಯ ಬಗ್ಗೆ ಪ್ರಸ್ತಾಪಿಸಿದರು.

ಜಿಲ್ಲಾ ಮದ್ರಸ ಮೆನೇಜ್‌ಮೆಂಟ್‌ನ ನೂತನ ಜಿಲ್ಲಾಧ್ಯಕ್ಷರನ್ನಾಗಿ ಎಮ್.ಎಚ್.ಮೊಯಿದೀನ್ ಹಾಜಿ ಅಡ್ಡೂರುರವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಪುತ್ತೂರು ರೇಂಜ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸರ್ವಸಮ್ಮತವಾದ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದರು. ಎಲ್ಲಾ ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಶನ್‌ನ ಸಲಹೆಗಾರ ನ್ಯಾಯವಾದಿ ಸಿದ್ದೀಕ್ಷ ಹಾಜಿ ಕಲ್ಲೇಗರವರು ಮಾತನಾಡಿ ಮದ್ರಸ ಮಕ್ಕಳ ಹಿತದೃಷ್ಟಿಯಿಂದ ಕೆಲವೊಂದು ವಿಷಯಗಳ ಬಗ್ಗೆ ಬದಲಾವಣೆಗೆ ಮದ್ರಸ ಮೆನೇಜ್‌ಮೆಂಟ್ ಮುಂದೆ ಬರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಎಮ್.ಎಚ್.ಮೊಯಿದೀನ್ ಹಾಜಿ ಅಡ್ಡೂರು ಮಾತನಾಡಿ ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಈವರೆಗೆ ಹಮ್ಮಿಕೊಂಡು ಬಂದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಸನ್ಮಾನ: ದ.ಕ.ಜಿಲ್ಲಾ ಮದ್ರಸ ಮೆನೇಜ್‌ಮೆಂಟ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಮ್.ಎಚ್.ಮೊಯಿದೀನ್ ಹಾಜಿ ಅಡ್ಡೂರುರವರಿಗೆ ಪುತ್ತೂರು ಜಮೀಯತ್ತುಲ್ ಮುಅಲ್ಲಮೀನ್ ಹಾಗೂ ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಮತ್ತು ಪಡೀಲ್ ಮೊಯಿನುಲ್ ಇಸ್ಲಾಂ ಜುಮಾ ಮಸೀದಿ, ಮದ್ರಸ ಸಮಿತಿ ಇದರ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರತಿನಿಧಿ ಸಾಲ್ಮರ ಮಹಮ್ಮದ್ ಶರೀಫ್, ಪುತ್ತೂರು ಜಮೀಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಹನೀಫ್ ದಾರಿಮಿ ನೆಕ್ಕಿಲಾಡಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್‌ಟಿ ಅಬ್ದುಲ್ ರಝಾಕ್ ಹಾಜಿ, ಪಡೀಲ್ ಮೊಯಿನುಲ್ ಇಸ್ಲಾಂ ಮಸೀದಿ ಮದ್ರಸ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ಆರ್‌ಪಿ ಪಡೀಲ್, ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಶನ್ ವಿವಿಧ ಪದಾಧಿಕಾರಿಗಳಾದ ಎಂ.ಎಸ್. ಅಬ್ದುಲ್ ಹಮೀದ್, ನೌಶಾದ್ ಹಾಜಿ ಬೊಳುವಾರು, ಮುಹಮ್ಮದ್ ಬುಳೇರಿಕಟ್ಟೆ, ಶೇಖ್ ಜೈನುದ್ದೀನ್, ಹಸನ್ ಸಾಲ್ಮರ, ಹುಸೈನ್ ಗಾರ್ಬಲ್ ಪಡೀಲ್, ಖಲಂದರ್ ಪಡೀಲ್ ಮೊದಲಾದವರು ಉಪಸ್ಥಿತರಿದ್ದರು.ಪುತ್ತೂರು ಮದ್ರಸ ಮೆನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಬಪ್ಪಳಿಗೆರವರನ್ನು ಆಯ್ಕೆ ಮಾಡಲಾಯಿತು. ಮದ್ರಸ ಮೆನೇಜ್‌ಮೆಂಟ್ ಖಜಾಂಜಿ ಅಬ್ದುಲ್ ಹಮೀದ್ ಲವ್ಲಿ ಬಪ್ಪಳಿಗೆ ವಂದಿಸಿದರು.

LEAVE A REPLY

Please enter your comment!
Please enter your name here