ಡಾ| ಎಂ.ಸೈಯದ್ ನಝೀರ್‌ರವರಿಗೆ ಪ್ರತಿಷ್ಠಿತ ಬಿಸಿನೆಸ್ ಲೀಡರ್ ಶಿಪ್ ಪ್ರಶಸ್ತಿ

0

ಮಂಗಳೂರು: ವಾಣಿಜ್ಯೋದ್ಯಮಿ, ಪುತ್ತೂರಿನ ಡಾ|ಎಂ. ಸೈಯದ್ ನಝೀರ್ ಅವರಿಗೆ ಗ್ಲೋಬಲ್ ಟ್ರಂಪ್ ಫೌಂಡೇಶನ್‌ನ ಪ್ರತಿಷ್ಠಿತ ಬಿಸಿನೆಸ್ ಲೀಡರ್‌ಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾಜಸೇವಾ ಕಾರ್ಯದಲ್ಲಿ ಅತ್ಯುನ್ನತ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರತಿಷ್ಠಿತ ಅಲಾಫ್ಟ್ ಬೈ ವ್ಯಾರಿಯೆಟ್ ಹೋಟೆಲ್ ಸಭಾಂಗಣದಲ್ಲಿ ಏ. 8ರಂದು ಜರಗಿದ ಬಿಸಿನೆಸ್ ಲೀಡರ್ ಶಿಪ್ ಸಮ್ಮಿಟ್ -2023 ಸಮಾವೇಶದಲ್ಲಿ ಉದ್ಯಮ ಕ್ಷೇತ್ರದ ಸಾಧಕರ ಸಮ್ಮುಖದಲ್ಲಿ ಅತಿಥಿ ಗಣ್ಯರು ಡಾ| ಎಂ.ಸೈಯದ್ ನಜೀರ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.‌ ಸಮಾವೇಶದಲ್ಲಿ ದೇಶದಾದ್ಯಂತದ ಸುಮಾರು 250ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯಮಿಗಳು ಭಾಗವಹಿಸಿದ್ದರು. ಭಾರತ ಸರಕಾರದ ಎಂಎಸ್‌ಎಂಇ ಉಪನಿರ್ದೇಶಕ ಗೋಪಿನಾಥ್ ರಾವ್, ಕ್ಯಾಡಿಲಾ ಫಾರ್ಮಾಸಿಟಿಕಲ್ ಇಂಡಿಯಾ ಉಪಾಧ್ಯಕ್ಷ ಡಾ.ಪಿ.ಕೆ.ರಜಪೂತ್, ಇನ್‌ಸ್ಟಿಟ್ಯೂಟ್ ಆಫ್ ಸೈಂಟಿಸ್ಟ್ ಎಂಡ್ ಟೆಕ್ನಾಲಜಿಸ್ ಉಪಾಧ್ಯಕ್ಷ ಡಾ| ಕೆ.ಪ್ರಭಾಕರನ್, ಯುಎನ್ ಇಂಟರ್ ನೇಶನಲ್ ಯೂತ್ ಕೌನ್ಸಿಲ್‌ನ ಡಾ| ಪಿ.ಜಸ್ಟೀನ್ ಆಂಟನಿ, ರಿಲೆಯನ್ಸ್ ಜಿಯೊ ಸಹಾಯಕ ಉಪಾಧ್ಯಕ್ಷೆ ಮಿ| ಶ್ವೇತಾ ಮಹೇಂದ್ರ, ಗ್ಲೋಬಲ್ ಟ್ರಂಪ್ ಫೌಂಡೇಶನ್‌ನ ಸ್ಥಾಪಕರಾದ ಅಮಿತ್ ಜೈನ್, ಇಮೇಜ್ ಪ್ಲಾನೆಟ್ ಸ್ಥಾಪಕರಾದ ಮೋನಿಕಾ ಜೈನ್ ಸಮಾವೇಶದಲ್ಲಿ ಅತಿಥಿಗಳಾಗಿದ್ದರು. ಪುತ್ತೂರು ಮುರ ನಿವಾಸಿ, ಪ್ರಿಯಾ ಟ್ರಾನ್ಸ್‌ಪೋರ್ಟ್ ಮಾಲಕರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಡಾ| ಎಂ.ಸೈಯದ್ ನಜೀರ್ ವಾಣಿಜೋದ್ಯಮದ ಜತೆಗೆ ಸಮಾಜಸೇವೆ, ಪರಿಸರ ಹಾಗೂ ಹಸಿರುಕರಣ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಇವರ ವಿಶೇಷ ಸಾಧನೆಗಾಗಿ ದಾದಾಸಾಹೇಬ್ ಪಾಲ್ಕೆ ಐಕಾನ್ ಅವಾರ್ಡ್ ಫಿಲ್ಮ್ ಆರ್ಗನೈಸೇಶನ್ ಪ್ರಶಸ್ತಿ, ಛತ್ರಪತಿ ಶಿವಾಜಿ ಮಹಾರಾಜ್ ಗೌರವ ಪ್ರಶಸ್ತಿ ಮತ್ತು 9ನೇ ಫಿಲಾಸಫಿಕಲ್ ಮುಂಬೈ ಪ್ರೆಸ್ ಮೀಡಿಯಾ ಅವಾರ್ಡ್ 2022 ಸೇರಿದಂತೆ ಆನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. ಡಾ| ಎಂ.ಎಸ್. ನಝೀರ್ ಸಾಹೇಬ್ ಜೆಮ್ಸ್ ಗೇಟ್ ಜ್ಯುವೆಲರ್ಸ್ (ಆಸ್ಟ್ರೋ ಜೇಮ್ಸ್) ಮತ್ತು ಅಲ್ ಖಿಝಾರ್ ಪರ್ಫ್ಯೂಮ್ ಬ್ರಾಂಡ್‌ನ ಮಾಲೀಕರಾಗಿರುವ ಇವರು ಒಳನಾಡು ಮೀನುಗಾರಿಕೆ, ಮೀನು ತಳಿಗಳ ಅಭಿವೃದ್ಧಿಯಲ್ಲಿ ಅಂತರರಾಷ್ಟ್ರೀಯ ಪರಿಣತರಾಗಿದ್ದಾರೆ. ಸುಗಂಧ ಮತ್ತು ಸುಗಂಧ ದ್ರವ್ಯಗಳ ಸಲಹೆಗಾರ ಮತ್ತು, ಹರ್ಮಲ್ ಬಖೂರ್ ವಿಜ್ಞಾನಿ. ಕಳೆದ 43 ವರ್ಷಗಳಿಂದ ಪರಿಸರ, ಘನತ್ಯಾಜ್ಯ ನಿರ್ವಹಣೆ, ಬೋಟಿಂಗ್ ಮತ್ತು ಮೀನುಗಾರಿಕೆ, ಪ್ಲಾಸ್ಟಿಕ್ ಮುಕ್ತ ಪರಿಸರ, ಮರಗಳ ಹಾಗೂ ನೀರು ಸಂರಕ್ಷಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ| ಎಂ.ಎಸ್.ನಝೀರ್ ಸಾಹೇಬ್ 150ಕ್ಕೂ ಹೆಚ್ಚು ಕೆರೆಗಳು ಮತ್ತು ಕೊಳಗಳನ್ನು ಸ್ವಚ್ಛಗೊಳಿಸಿದ್ದಾರೆ. ಗಿಡಗಳ ನೆಡುವಿಕೆ, ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ಹೆಚ್ಚುಸುವಿಕೆ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ| ಎಂ.ಎಸ್ ನಜೀರ್ ಸಾಹೇಬ್. ಸಮಾಜಮುಖಿ ಚಿಂತಕರೂ ಆಗಿರುವ ಡಾ| ಎಂ.ಎಸ್. ನಝೀರ್ ಸಾಹೇಬ್ ಅವರು ಸಮಾಜದಲ್ಲಿರುವ ಅಶಕ್ತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ಇವರ ಆದಾಯದ ಒಂದು ಭಾಗವು ಬಡ ಮತ್ತು ನಿರ್ಗತಿಕರ ಜನರ ಆರೋಗ್ಯಕ್ಕೆ ಹೋಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here