ಇಂದು(ಜು.31): ಕೆಎಸ್‌ಆರ್ ಟಿಸಿ ಸಂಚಾರ ನಿಯಂತ್ರಕ ರಾಘವ ಕೆ ಸೇವಾ ನಿವೃತ್ತಿ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನ ಮಂಗಳೂರು 1ನೇ ಘಟಕದಲ್ಲಿ ಸಂಚಾರ ನಿಯಂತ್ರಕರಾದ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಖಂಡಿಗೆ ನಿವಾಸಿ ರಾಘವ ಕೆ ಅವರು ಇಂದು (ಜು.31)ರಂದು ನಿವೃತ್ತರಾಗಲಿದ್ದಾರೆ.


1994ರಲ್ಲಿ ಮಂಗಳೂರು 1ನೇ ಘಟಕದ ನಿರ್ವಾಹಕರಾಗಿ ಸೇವೆ ಆರಂಭಿಸಿರುವ ಅವರು 2009ರಲ್ಲಿ ಓಲ್ವೋ ಬಸ್ಸಿನ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಕೇಂದ್ರ ಕಚೇರಿಯಿಂದ ‘ಉತ್ತಮ ನಿರ್ವಾಹಕ’ ಪುರಸ್ಕಾರಕ್ಕೆ ಭಾಜನರಾಗಿದ್ದರು. 2019ರಿಂದ ಸಂಚಾರ ನಿಯಂತ್ರಕರಾಗಿ ಭಡ್ತಿ ಹೊಂದಿ ಮಂಗಳೂರು 1ನೇ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು.

LEAVE A REPLY

Please enter your comment!
Please enter your name here